BengaluruPolitics

ಪ್ರಧಾನಿ ನರೇಂದ್ರ ಮೋದಿಯವರು ಕಲಾವಿದರು; ಡಿ.ಕೆ.ಶಿವಕುಮಾರ್‌

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿಯವರು ಕಲಾವಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿನ್ನೆ ಮೋದಿಯವರು ಯಡಿಯೂರಪ್ಪರನ್ನು ಹೊಗಳಿದ್ದರ ಬಗ್ಗೆ ಪ್ರತಿಕ್ರಿಯಿಸುತ್ತಾ ಲೇವಡಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಗಮನೆ ಅಪಾರವಾದ ಗೌರವವಿದೆ. ಆದ್ರೆ, ಯಡಿಯೂರಪ್ಪರನ್ನು ಅವರು ಈಗ ಹೊಗಳುತ್ತಿದ್ದಾರೆ. ಅಂದು ಯಡಿಯೂರಪ್ಪ ಅವರು ರಾಜೀನಾಮೆ ನೀಡುವಾಗ ಕಣ್ಣೀರು ಹಾಕುತ್ತಾ ರಾಜಭವನಕ್ಕೆ ಹೋದರು. ಯಡಿಯೂರಪ್ಪ ಅವರಿಗೆ ಆಗ ಕೊಟ್ಟ ನೋವು, ಅವರಿಟ್ಟ ಕಣ್ಣೀರಿಗೆ ಈಗ ಮೋದಿ ಉತ್ತರ ಕೊಡಬೇಕಿದೆ. ಯಡಿಯೂರಪ್ಪ ಅವರ ಕುಟುಂಬ ಹಾಗೂ ಸ್ನೇಹಿತರ ಮನೆಗಳ ಮೇಲೆ ಐಟಿ ರೇಡ್‌ ಮಾಡಿಸಲಾಯಿತು. ಇದೆಲ್ಲಾ ಯಾಕಾಯ್ತು ಎಂಬುದರ ಬಗ್ಗೆ ಮೊದಲು ಜನತೆಗೆ ಉತ್ತರ ಕೊಡಲಿ ಎಂದು ಹೇಳಿದರು.

Share Post