BengaluruEconomy

ಇನ್ಮೇಲೆ ತಿರುಪತಿ ಲಡ್ಡುನಲ್ಲಿ ನಂದಿನಿ ತುಪ್ಪದ ಸ್ವಾದ ಇರೋದಿಲ್ಲ..!

ಬೆಂಗಳೂರು; ತಿರುಪತಿ ತಿಮ್ಮಪ್ಪನ ಪ್ರಸಾದದ ಸ್ವಾದ ಮಾರುಹೋದವರೇ ಇಲ್ಲ. ಯಾಕಂದ್ರೆ ಅಷ್ಟೊಂದು ಟೇಸ್ಟಿ ತಿರುಪತಿ ಲಡ್ಡು. ತಿಮ್ಮಪ್ಪನ ಪ್ರಸಾದ ಲಡ್ಡುಗಾಗಿಯೇ ತಿರುಪತಿಗೆ ಹೋಗುವವರು ಇದ್ದಾರೆ. ದುಪ್ಪಟ್ಟು ಹಣ ಕೊಟ್ಟು ಬ್ಲಾಕ್‌ನಲ್ಲೂ ಲಡ್ಡು ಖರೀದಿ ಮಾಡಿ ತರುತ್ತಾರೆ. ಅಂದಹಾಗೆ, ತಿರುಪತಿ ಲಡ್ಡು ಸ್ವಾದದಲ್ಲಿ ನಮ್ಮ ನಂದಿನಿ ತುಪ್ಪದ ಪಾತ್ರವೂ ಇದೆ. ಕಳೆದ ಐವತ್ತು ವರ್ಷಗಳಿಂದ ತಿರುಪತಿ ಲಡ್ಡು ತಯಾರಿಕೆಯಲ್ಲಿ ನಂದಿನಿ ತುಪ್ಪ ಬಳಸಲಾಗುತ್ತಿತ್ತು. ಆದ್ರೆ ಇದೀಗ, ತಿರುಪತಿಗೆ ಇನ್ನು ನಮ್ಮ ನಂದಿನಿ ತುಪ್ಪ ಹೋಗೋದಿಲ್ಲ. 

ಇನ್ಮೇಲೆ ನಂದಿನಿ ತುಪ್ಪವನ್ನು ತಿರುಪತಿಗೆ ಕಳುಹಿಸೋದಿಲ್ಲ ಅಂತ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯಕ್‌ ತಿಳಿಸಿದ್ದಾರೆ. ದೇವಸ್ಥಾನಕ್ಕೆ ನಾವು ಆರು ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪ ಪೂರೈಕೆ ಮಾಡುತ್ತಿದ್ದೆವು. ರಿಯಾಯಿತಿ ದರದಲ್ಲಿ ತುಪ್ಪ ನೀಡುತ್ತಿದ್ದೆವು. ಆದರೆ ಬಾರಿ ನಾವು ಟೆಂಡರ್‌ ಕೈಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

 

Share Post