BengaluruCrime

ಯಾವುದನ್ನೂ ನೋಡದೆ ಮುಲಾಜಿಲ್ಲದೆ ಒತ್ತುವರಿ ತೆರವು; ಆರ್‌.ಅಶೋಕ್‌

ಬೆಂಗಳೂರು; ನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ನಿನ್ನೆಯಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು 600 ಕಟ್ಟಡಗಳಿಗೆ ನೋಟಿಸ್‌ ನೀಡಲಾಗಿದೆ. ಇಂದು    ಯಲಹಂಕ ನ್ಯೂಟೌನ್​ ಎನ್​ಸಿಬಿಎಸ್​​ನಲ್ಲಿ ಒತ್ತುವರಿ ಕಟ್ಟಡಗಳನ್ನು ಜೆಸಿಬಿ, ಟ್ರ್ಯಾಕ್ಟರ್ ಮೂಲಕ ತೆರವು ಮಾಡಲಾಗುತ್ತಿವೆ.

ಈ ಬಗ್ಗೆ ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿದ್ದು, ಹಿಂದಿನ ಸರ್ಕಾರಗಳು ಮಳೆ ಬಂದಾಗ ಡೆಮಾಲಿಷನ್​ ನಾಟಕವಾಡಿ ಮಳೆ ನಿಂತ ಬಳಿಕ ನಿಲ್ಲಿಸುತ್ತಿದ್ದರು. ಆದರೆ ನಮ್ಮ ಸರ್ಕಾರ ಒತ್ತುವರಿ ತೆರವಿಗೆ ತಾರತಮ್ಯ ಮಾಡಲ್ಲ. ಯಾವುದೇ ಒತ್ತುವರಿ ಇದ್ದರೂ ತೆರವು ಮಾಡೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ನಿಲ್ಲಲ್ಲ, ಅಧಿಕಾರಿಗಳಿಗೆ ಸೂಚಿಸಲಾಗಿದೆ. ದಾಖಲೆ ಇಲ್ಲದಿದ್ದರೆ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಿದ್ದಾರೆ.

 

Share Post