Bengaluru

ಆಜಾನ್‌ ಶಬ್ದ ಕಡಿಮೆ ಮಾಡಿಸಿ, ಅದರ ವಿರುದ್ಧ ಸ್ಪರ್ಧೆ ಸಲ್ಲ; ಸಚಿವ ಕೆ.ಎಸ್‌.ಈಶ್ವರಪ್ಪ

ಬೆಂಗಳೂರು: ಆಜಾನ್‌ ವಿರುದ್ಧ ಸ್ಪರ್ಧೆ ಮಾಡುವುದು ಸರಿಯಲ್ಲ. ಅದರ ಬದಲಾಗಿ ಮುಸ್ಲಿಮರ ಮನವೊಲಿಸಿ ಆಜಾನ್‌ ಶಬ್ದ ಕಡಿಮೆ ಮಾಡಿಸಬೇಕು ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ. ಕೆಲ ಹಿಂದೂಪರ ಸಂಘಟನೆಗಳು ಮಸೀದಿಗಳಲ್ಲಿ ಬೆಳಗಿನ ಆಜಾನ್‌ಗೆ ಧ್ವನಿವರ್ದಕಗಳನ್ನು ಬಳಸಿದರೆ, ಆ ವೇಳೆ ನಾವೂ ಧ್ವನಿವರ್ಧಕ ಬಳಸಿ ಶ್ರೀರಾಮನ ಭಜನೆ ಮಾಡುತ್ತೇವೆ ಎಂದು ಹೇಳಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ಎಲ್ಲರೂ ಧ್ವವರ್ದಕ ಬಳಸುತ್ತಾ ಹೋದರೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.

ಧ್ವನಿವರ್ಧಕ ಬಳಸಿ ಹೆಚ್ಚಿನ ಸೌಂಡ್‌ ಇಡುವುದರಿಂದ ಜನರಿಗೆ ತೊಂದರೆಯಾಗಲಿದೆ. ಈ ಸಮಸ್ಯೆಯನ್ನು ನಿವಾರಿಸಲು ಯತ್ನಿಸಬೇಕು. ಅದು ಬಿಟ್ಟು ನಾವೂ ಶಬ್ದ ಮಾಡಿ ಜನರಿಗೆ ಮತ್ತೊಂದು ಸಮಸ್ಯೆ ತಂದೊಡ್ಡಬಾರದು. ಮುಸಲಮರೊಂದಿಗೆ ಮಾತನಾಡಿ, ಅಜಾನ್‌ ಶಬ್ದ ಕಡಿಮೆ ಮಾಡಿಸಿದರೆ ಸಾಕು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

 

Share Post