BengaluruPolitics

ಸಿಎಂ ಎದುರು ಬೆಲೆ ಏರಿಕೆ ವಿರುದ್ಧ ಗುಡುಗಿದ ವ್ಯಕ್ತಿ

ಬೆಂಗಳೂರು; ಸಿಎಂ ಬೊಮ್ಮಾಯಿ ರೋಡ್‌ ಶೋ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಬೆಲೆ ಏರಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಇಂದು ಸಿಎಂ ಬೊಮ್ಮಾಯಿಯವರು ನೆಲಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಶಂಕರ್‌ ನಾಯಕ್‌ ಮತಯಾಚನೆ ಮಾಡಿದರು. ಈ ವೇಳೆ ವ್ಯಕ್ತಿಯೊಬ್ಬ ಸರ್ಕಾರ ಹಾಗೀ ಸಿಎಂ ಬೊಮ್ಮಾಯಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಗ್ಯಾಸ್‌ ಬೆಲೆ ಪ್ರತಿ ತಿಂಗಳೂ ಏರಿಕೆಯಾಗುತ್ತಿದೆ. ನಾವು ಮತ ಹಾಕುತ್ತೇವೆ. ಆದ್ರೆ ನಮಗೆ ಅವರು ಏನು ಕೊಟ್ಟಿದ್ದಾರೆ. ಅವರು ಯಾರಿಗೆ ಸಿಎಂ ಎಂದು ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ. ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು ಆತನನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ ಸುಮ್ಮನಾಗಲಿಲ್ಲ. ಕೊನೆಗೆ ಪೊಲೀಸರು ಆತನನ್ನು ಪಕ್ಕಕ್ಕೆ ತಳ್ಳಿದ್ದಾರೆ.

Share Post