BengaluruCrimeDistricts

ಪಟಾಕಿ ಕಿಡಿ ಹಾರಿ ಸಚಿವ ಕೆ.ಎನ್‌.ರಾಜಣ್ಣ ಕಣ್ಣಿಗೆ ಗಾಯ

ತುಮಕೂರು; ಅಭಿಮಾನಿಗಳು ಹಚ್ಚಿದ ಪಟಾಕಿಯ ಬೆಂಕಿಯ ಕಿಡಿ ಹಾರಿ ಸಹಾಕರ ಸಚುವ ಕೆ.ಎನ್‌.ರಾಜಣ್ಣ ಅವರ ಕಣ್ಣಿಗೆ ಗಾಯವಾಗಿದೆ. ಕುಣಿಗಲ್‌ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ.

ಕೆ.ಎನ್‌.ರಾಜಣ್ಣ ಅವರು ಹಾಸನ ಜಿಲ್ಲಾ ಉಸ್ತುವಾರಿಯಾಗಿದ್ದು, ಇಂದು ಶಕ್ತಿ ಯೋಜನೆಗೆ ಚಾಲನೆ ನೀಡಲು ಹಾಸನಕ್ಕೆ ಹೋಗುತ್ತಿದ್ದರು. ತುಮಕೂರಿನಿಂದ ಕುಣಿಗಲ್‌ ಮಾರ್ಗವಾಗಿ ಹೋಗುತ್ತಿದ್ದಾಗ, ಅಭಿಮಾನಿಗಳು ಕುಣಿಗಲ್‌ ಪಟ್ಟಣದಲ್ಲಿ ಸಚಿವರ ಕಾರನ್ನು ತಡೆದಿದ್ದಾರೆ. ಅವರಿಗೆ ಹೂಮಾಲೆ ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಲಾಗಿದ್ದು, ಆಗ ಪಟಾಕಿಯ ಕಿಡಿ ಸಚಿವರ ಕಣ್ಣಿಗೆ ಬಿದ್ದಿದೆ.

ಕೂಡಲೇ ಸಚಿವರನ್ನು ಕುಣಿಗಲ್‌ನ ಎಂ.ಎಂ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಕೊಡಿಸಲಾಯಿತು, ಬಳಿಕ ಅವರು ಹಾಸನಕ್ಕೆ ತೆರಳಿದರು.

 

Share Post