BengaluruCrimeDistricts

ಬೆಂಗಳೂರಿನ 10 ಕಡೆ ಸೇರಿ ರಾಜ್ಯದ 25 ಕಡೆ ಲೋಕಾಯುಕ್ತ ದಾಳಿ

ಬೆಂಗಳೂರು; ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದ ಹತ್ತು ಕಡೆ ಹಾಗೂ ರಾಜ್ಯದ ಒಟ್ಟು 25 ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಬೆಂಗಳೂರಿನಲ್ಲಿ ದಾಖಲಾಗಿರುವ ನಾಲ್ಕು ಎಫ್‌ಐಆರ್‌ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. 

ಬಿಬಿಎಂಪಿ ಮಹದೇವಪುರ ವಲಯ ಆರ್‌ಐ ನಟರಾಜ್‌ ಅವರಿಗೆ ಸೇರಿದ ಆವಲಹಳ್ಳಿ ಮನೆ ಮೇಲೆ ದಾಳಿ ನಡೆಸಲಾಗಿದೆ. ನಟರಾಜ್‌ ಅವರು ಆಗಸ್ಟ್‌ 4ರಂದು ಸಿಕ್ಕಿಬಿದ್ದಿದ್ದರು.  79 ಫ್ಲ್ಯಾಟ್ ಖಾತೆ ಮಾಡಲು 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು.  ಖಾಸಗಿ ವ್ಯಕ್ತಿ ಪವನ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು,  ಮಂಜುನಾಥ್ ಎಂಬವವರು ದೂರು ಕೊಟ್ಟಿದ್ದರು. ಇದರ ಆಧಾರದ ಮೇಲೆ ದಾಳಿ ನಡೆದಿತ್ತು. ಈ ಸಂಬಂಧ ಎಫ್‌ಐಆರ್‌ ದಾಖಲಾಗಿದ್ದು, ಅವರ ಆಸ್ತಿ ಪರಿಶೀಲನೆಗಾಗಿ ಇಂದು ದಾಳಿ ನಡೆಸಲಾಗಿದೆ.

 

Share Post