BengaluruPolitics

ಗುತ್ತಿಗೆದಾರರು ಮಾಡಿರುವ ಕಾಮಗಾರಿ ಸಾಬೀತುಪಡಿಸಲಿ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ಬಿಬಿಎಂಪಿ ಗುತ್ತಿಗೆದಾರರು ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಚಾರಕ್ಕಾಗಿ ಯಾರು ಬೇಕಾದರೂ ಹೋಗಲಿ. ಯಾರು ಏನು ಮಾಡುತ್ತಿದ್ದಾರೆ. ಯಾರು ಏನು ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದರು.

ಗುತ್ತಿಗೆದಾರರನ್ನು ದೆಹಲಿಗೂ ಕರೆಯಲಾಗಿದೆ. ಸುದ್ದಿಗೋಷ್ಠಿ ಮಾಡಲು ಹೇಳಿದ್ದು ಯಾರು ಅನ್ನೋದೂ ಗೊತ್ತಿದೆ. ಆದ್ರೆ ಕಾಮಗಾರಿ ಆಗಿದೆಯಾ, ಇಲ್ಲವಾ ಎಂಬುದರ ಬಗ್ಗೆ ತನಿಖೆ ಮಾಡಬೇಕಿದೆ. ಕಾನೂನಿನ ಪ್ರಕಾರ ತನಿಖೆಗೆ ಸೂಚಿಸಿದ್ದೇವೆ. ತನಿಖೆ ನಂತರ ಬಿಲ್‌ ಪಾವತಿ ಮಾಡುತ್ತೇವೆ. ಮಾಡಿರುವ ಕಾಮಗಾರಿ ಸಾಬೀತು ಮಾಡಲಿ. ಆಗ ಎಲ್ಲರಿಗೂ ನ್ಯಾಯ ಒದಗಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

Share Post