Bengaluru

ಬೆಂಗಳೂರಿನಲ್ಲಿ ಚಿರತೆ ಕಾರ್ಯಾಚರಣೆ ಜೋರು; ಮೈಸೂರಿಂದ ಬಂದ ತಂಡ!

ಬೆಂಗಳೂರು; ಬೆಂಗಳೂರಿನ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ಚಿರತೆ ಓಡಾಟ ಕಂಡುಬಂದಿದೆ. ಹೀಗಾಗಿ ಚಿರತೆಯನ್ನು ಹಿಡಿಯಲು ಬೋನು ಇಟ್ಟು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಮೈಸೂರಿನಿಂದ ಎಕ್ಸ್‌ಪರ್ಟ್‌ ಟೀಂ ಕೂಡಾ ಬೆಂಗಳೂರಿಗೆ ಆಗಮಿಸಿದೆ.

ರಾತ್ರಿ ಸುಮಾರು 12.30 ಸುಮಾರಿಗೆ ಚಿರತೆ ಇಲ್ಲಿಗೆ ಬಂದಿದ್ದು, ಏರಿಯಾದಲ್ಲಿ ಓಡಾಟ ನಡೆಸಿದೆ. ಪೊಲೀಸರ ನೈಟ್ ಬೀಟ್ ವೇಳೆ ಚಿರತೆ ಕಾಣಿಸಿದ್ದು, ಖಾಲಿ ಬಿಲ್ಡಿಂಗ್ ಮುಂಭಾಗದಲ್ಲಿ ಚಿರತೆ ಓಡಿದ್ದನ್ನು ಪೊಲೀಸರು ನೋಡಿದ್ದಾರೆ. ಸದ್ಯ ಬಿಲ್ಡಿಂಗ್ ಒಳಗಡೆಯೇ ಚಿರತೆ ಇರುವ ಸಾಧ್ಯತೆ ಇದೆ. ಹೀಗಾಗಿ ಎರಡು ಬೋನುಗಳನ್ನಿಟ್ಟು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

 

Share Post