BengaluruPolitics

ಸಿದ್ದರಾಮಯ್ಯ ವೈಯಕ್ತಿಕ ಜೀವನದ ಪಿಸುಮಾತು; ವೈರಲ್‌ ಆಯ್ತು ಕುರುಬ ಮುಖಂಡರ ವಿಡಿಯೋ

ಬೆಂಗಳೂರು; ಖಾಸಗಿ ಹೋಟೆಲ್‌ನಲ್ಲಿ ಕುರುಬ ಮುಖಂಡರ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈಶ್ವರಪ್ಪ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಲು ಕರೆಯಲಾಗಿದ್ದ ಈ ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ಇಬ್ಬರು ಕುರುಬ ನಾಯಕರು ಗುಸುಗುಸು ಪಿಸುಪಿಸು ಮಾತಾಡಿದ್ದಾರೆ. ಅದರಲ್ಲಿ ಮಾಜಿ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದು, ಆ ಮಾತುಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ.

ಕುರುಬ ಸಮಾಜದ ಮುಖಂಡರಾದ ಮುಕುಡಪ್ಪ ಹಾಗೂ ಎಸ್‌.ಪುಟ್ಟಸ್ವಾಮಿ ಅವರು ಸುದ್ದಿಗೋಷ್ಠಿ ಆರಂಭಕ್ಕೂ ಮೊದಲು ಶಿವಮೂರ್ತಿ ಶರಣರ ವಿಚಾರವನ್ನು ಗುಸುಗುಸು ಮಾತನಾಡಿದ್ದಾರೆ. ಇದೇ ವೇಳೆ ನಮ್ಮ ಟಗರು ಏನ್ ಕಡಿಮೆನಾ? 20 ಕುರಿಗಳ ಮೇಲೆ ಒಂದು ಟಗರು ಎಗರಿ ಬೀಳುತ್ತೆ ಎಂದು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ಸಿದ್ದರಾಮಯ್ಯರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಜೊತೆ ಕೆಲ ಪದ ಪ್ರಯೋಗಗಳೂ ನಡೆದಿವೆ.

Share Post