Bengaluru

29ಕ್ಕೆ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕರ್ನಾಟಕ ಬಂದ್‌; 104 ಸಂಘಟನೆಗಳ ಬೆಂಬಲ

ಬೆಂಗಳೂರು; ಸೆಪ್ಟೆಂಬರ್‌ 29ರಂದು ಕಾವೇರಿಗಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ನೂರಾರು ಸಂಘಟನೆಗಳು ಇದಕ್ಕೆ ಬೆಂಬಲ ಕೊಟ್ಟಿವೆ. ಸುಮಾರು 104 ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ಸೆಪ್ಟೆಂಬರ್‌ 29ರಂದು ಕರ್ನಾಟಕ ಸಂಪೂರ್ಣ ಬಂದ್‌ ಆಗುವ ಸಾಧ್ಯತೆ ಇದೆ.

ಗಡಿಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳನ್ನು ಕೂಡಾ ಬಂದ್‌ ಮಾಡೋದಕ್ಕೆ ಸಿದ್ಧತೆ ನಡೆಸಲಾಗಿದೆ. ಇಂದು ಕನ್ನಡ ಪರ ಸಂಘಟನೆಗಳ ನಾಯಕರು ಸಭೆ ನಡೆಸಿ, ಹೋರಾಟದ ರೂಪುರೇಷೆ ಸಿದ್ಧಪಡಿಸಿದ್ದಾರೆ.

 

ಬಂದ್‌ಗೆ ಯಾರ್ಯಾರ ಬೆಂಬಲ..?
=====================
ಓಲಾ, ಉಬರ್ ಚಾಲಕರ ಸಂಘ
ಆದರ್ಶ ಆಟೋ ಯೂನಿಯನ್
ಕರ್ನಾಟಕ ಕೈಗಾರಿಕೆಗಳ ಸಂಘ
ಕರ್ನಾಟಕ ರಸ್ತೆ ಸಾರಿಗೆ ಕ್ರಿಯಾ ಸಮಿತಿ
ವಿದ್ಯಾರ್ಥಿ ಸಂಘಟನೆಗಳು
ಮಾರುಕಟ್ಟೆ ಸಂಘ
ಚಲನಚಿತ್ರ ವಾಣಿಜ್ಯ ಮಂಡಳಿ
ಜಲಮಂಡಳಿ ನೌಕರರ ಸಂಘ
ಲಾರಿ ಮಾಲೀಕರ ಸಂಘ
ಹೋಟೆಲ್ ಅಸೋಸಿಯೇಷನ್
ಎಲ್ಲಾ ಕನ್ನಡಪರ ಸಂಘಟನೆಗಳು

Share Post