Districts

ಹೋರಾಟದ ನಡುವೆಯೂ ತಮಿಳುನಾಡಿಗೆ ಹರಿಯಿತು ಕಾವೇರಿ ನೀರು..!

ಮಂಡ್ಯ; ತಮಿಳುನಾಡಿಗೆ ನೀರು ಬಿಡಬಾರದು ಎಂದು ಹೋರಾಟಗಳು ತೀವ್ರಗೊಳ್ಳುತ್ತಿವೆ. ಹೀಗಿದ್ದರೂ ಕೂಡಾ ಇವತ್ತೂ ತಮಿಳುನಾಡಿಗೆ ನೀರು ಹರಿಸಲಾಗಿದೆಕೆಆರ್‌ಎಸ್ ಹಾಗೂ ಕಬಿನಿ ಡ್ಯಾಂಗಳಿಂದ ಇಂದು 6,075 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಕಾವೇರಿ ನೀರು ನಿರ್ವಹಣಾ ಸಮಿತಿ ಸೂಚನೆಯಂತೆ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಬಿಳುಗುಂಡ್ಲುಗೆ 5 ಸಾವಿರ ಕ್ಯೂಸೆಕ್ ನೀರು ತಲುಪಬೇಕು ಎಂದರೆ ಕನಿಷ್ಠ ಒಂದಿಂದ ಒಂದೂವರೆ ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರು ಹರಿಸಬೇಕು. ಹೀಗಾಗಿ ಕೆಆರ್‌ಎಸ್‌ನಿಂದ 3,575 ಕ್ಯೂಸೆಕ್, ಕಬಿನಿಯಿಂದ 2,500 ಕ್ಯೂಸೆಕ್ ಹರಿಸಲಾಗಿದೆ ಎಂದು ತಿಳಿದುಬಂದಿದೆ.

 

Share Post