Bengaluru

Karnataka Bandh; ಆರ್‌.ಟಿ.ನಗರದಲ್ಲಿ ಪ್ರವೀಣ್‌ ಶೆಟ್ಟಿ ಸೇರಿ ಹಲವರ ಬಂಧನ

ಬೆಂಗಳೂರು; ಟೌನ್‌ಹಾಲ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ಹೋರಾಟಗಾರರು ಸಿದ್ಧತೆ ನಡೆಸಿದ್ದರು. ಆದ್ರೆ ಪೊಲೀಸರು ಹೋರಾಟಗಾರರನ್ನು ಅವರಿರುವ ಸ್ಥಳದಲ್ಲೇ ಬಂಧಿಸಲಾಗುತ್ತಿದೆ. ಕರವೇ ಮುಖಂಡ ಪ್ರವೀಣ್‌ ಶೆಟ್ಟಿಯವರು ಆರ್‌ಟಿ ನಗರದ ಹೋಟೆಲ್‌ ಒಂದರಲ್ಲಿ ತಂಗಿದ್ದರು. ಅವರು ಪ್ರತಿಭಟನೆಗಾಗಿ ಹೊರಗೆ ಬರುತ್ತಿದ್ದಂತೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರ್‌ಟಿ ನಗರದ ಹೋಟೆಲ್‌ನಿಂದ ಹೊರಬಂದ ಪ್ರವೀಣ್‌ ಶೆಟ್ಟಿ ಅವರ ಕಾರ್ಯಕರ್ತರ ಜೊತೆಗೆ ಟೌನ್‌ಹಾಲ್‌ ಕಡೆ ಹೊರಡಲು ಸಿದ್ಧತೆ ನಡೆಸಿದ್ದರು. ಆದ್ರೆ, ಪೊಲೀಸರು ಹೋಟೆಲ್‌ ಬಳಿಯೇ ಪ್ರವೀಣ್‌ ಶೆಟ್ಟಿ ಸೇರಿ ಹಲವು ಪ್ರತಿಭಟನಾಕಾರರನ್ನು ಬಂಧಿಸಿದರು. ಅವರನ್ನು ಬಸ್‌ನಲ್ಲಿ ಹತ್ತಿಸಿ ಕರೆದೊಯ್ದರು.

Share Post