BengaluruPolitics

ಐಟಿ ದಾಳಿಯಲ್ಲಿ ಪತ್ತೆಯಾದ ಹಣಕ್ಕೂ ಪಂಚರಾಜ್ಯಗಳ ಚುನಾವಣೆಗೂ ನಂಟಿದೆಯಾ..?

ಬೆಂಗಳೂರು; ಗುತ್ತಿಗೆದಾರ ಅಂಬಿಕಾಪತಿ ಪ್ಲ್ಯಾಟ್‌ನಲ್ಲಿ ಸಿಕ್ಕ 42 ಕೋಟಿ ರೂಪಾಯಿ ಹಣಕ್ಕೂ, ಪಂಚರಾಜ್ಯಗಳ ಚುನಾವಣೆಗೂ ಲಿಂಕ್‌ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ಇದು ಕಲೆಕ್ಷನ್‌ ಮಾಡಿರುವ ಹಣ, ಪ್ರರ್ಸೆಂಟೇಜ್‌ ದುಡ್ಡಾಗಿದ್ದು, ಗುತ್ತಿಗೆದಾರರಿಗೆ ಟಾರ್ಚರ್‌ ನೀಡಿ ಸಂಗ್ರಹ ಮಾಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್‌ ಆರೋಪ ಮಾಡಿದ್ದಾರೆ.

ಒಬ್ಬ ಗುತ್ತಿಗೆದಾರನ ಬಳಿ ಇಷ್ಟೆಲ್ಲಾ ಹಣ ಇರೋದಕ್ಕೆ ಸಾಧ್ಯವೇ ಇಲ್ಲ. ಪಂಚರಾಜ್ಯಗಳ ಚುನಾವಣೆಗೆ ಹಣ ಹೊಂದಿಸಲು ಈ ಹಣ ಸಂಗ್ರಹಿಸಿರಬಹುದು ಎಂದು ಆರೋಪಿಸಲಾಗಿದೆ. ಈ ಹಣ ಯಾರಿಗೆ ಹೋಗಬೇಕು ಅನ್ನೋದನ್ನು ಗುತ್ತಿಗೆದಾರರೇ ಹೇಳಬೇಕು ಅಂತಾನೂ ಅಶ್ವತ್ಥನಾರಾಯಣ ಹೇಳಿದ್ದಾರೆ.

ಗುತ್ತಿಗೆದಾರರು ಈಗಲಾದರೂ ನಿಮಗೆ ಯಾರಿಂದ ಎಷ್ಟು ನೋವು ಆಗಿದೆ ಅನ್ನೋದನ್ನು ಬಹಿರಂಗ ಮಾಡಬೇಕು ಎಂದೂ ಅಶ್ವತ್ಥನಾರಾಯಣ್‌ ಆಗ್ರಹ ಮಾಡಿದ್ದಾರೆ.

 

Share Post