BengaluruPolitics

ನಾಲ್ಕು ಜನ ಬಿಟ್ಟೋದ್ರೆ ಪಕ್ಷಕ್ಕೇನೂ ನಷ್ಟವಿಲ್ಲ; ಅರುಣ್‌ ಸಿಂಗ್‌

ಬೆಂಗಳೂರು; ಚುನಾವಣೆ ಸಮಯದಲ್ಲಿ ಒಂದಷ್ಟು ಪಕ್ಷ ಬಿಡುತ್ತಾರೆ. ಯಾರೋ ನಾಲ್ಕು ಜನ ಬಿಟ್ಟುಹೋದರೆ ಪಕ್ಷಕ್ಕೇನೂ ನಷ್ಟವಾಗುವುದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಟಿಕೆಟ್‌ ಸಿಗಲಿಲ್ಲ ಅನ್ನೋ ಕಾರಣಕ್ಕೆ ಕೆವರು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಟಿಕೆಟ್‌ ಸಿಗದಿದ್ದರೂ ಪಕ್ಷದಲ್ಲಿ ಸ್ಥಾನಮಾನ ಸಿಗುತ್ತಿತ್ತು. ಆದ್ರೆ ಕೆಲವರು ದುಡುಕಿನ ನಿರ್ಧಾರ ತೆಗೆದುಕೊಂಡು ಪಕ್ಷಕ ಬಿಟ್ಟು ಹೋಗುತ್ತಿದ್ದಾರೆ. ಆದ್ರೆ ಅಂಥವರಿಗೆ ಬಿಜೆಪಿ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಿದೆ ಎಂದು ಅರುಣ್‌ ಸಿಂಗ್‌ ಇದೇ ವೇಳೆ ಹೇಳಿದ್ದಾರೆ. ಇನ್ನು ವೇಳೆ ಸವದಿಗೆ ಟಾಂಗ್‌ ಕೊಟ್ಟ ಅರುಣ್‌ ಸಿಂಗ್‌, ಪಕ್ಷ ಬಿಟ್ಟವರು ಹತ್ತು ವರ್ಷವಾದರೂ ರಾಹುಲ್‌ ಗಾಂಧಿ ಮುಖವನ್ನು ನೋಡುತ್ತಾರೋ ಇಲ್ಲವೋ ಎಂದು ಹೇಳಿದರು.

ಲಕ್ಷಣ ಸವದಿಯವರು ಜಗಳಗಂಟಿ ಪಕ್ಷಕ್ಕೆ ಹೋಗಿದ್ದಾರೆ. ಅಲ್ಲಿ ಅವರಿಗೆ ಭವಿಷ್ಯ ಇಲ್ಲ. ಕಾಂಗ್ರೆಸ್‌ ಸೇರುವ ನಿರ್ಧಾರ ಮಾಡಿ ಅವರು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಅರುಣ್‌ ಸಿಂಗ್‌ ಹೇಳಿದ್ದಾರೆ.

Share Post