BengaluruCrime

ಹಾಡಹಗಲೇ ಹೋಟೆಲ್‌ ಕ್ಯಾಶಿಯರ್‌ ಭೀಕರ ಹತ್ಯೆ; ಆರೋಪಿ ಅರೆಸ್ಟ್‌

ಬೆಂಗಳೂರು; ಬೆಂಗಳೂರಿನಲ್ಲಿ ಹಾಡಹಗಲೇ ಐಶಾರಾಮಿ ಹೋಟೆಲ್‌ ಒಂದರ ಕ್ಯಾಶಿಯರ್‌ ಒಬ್ಬರನ್ನು ಕೊಲೆ ಮಾಡಲಾಗಿದೆ. ಅದೇ ಹೋಟೆಲ್‌ನ ಹೌಸ್‌ ಕೀಪರ್‌ ಈ ಕೃತ್ಯ ಎಸಗಿದ್ದು, ಆತನನ್ನು ಬಂಧಿಸಲಾಗಿದೆ.

ಜೀವನ್‌ ಭೀಮಾ ನಗರದಲ್ಲಿರುವ ಮರುಗೇಶ್‌ ಪಾಳ್ಯದ ಹೋಟೆಲ್‌ನಲ್ಲಿರುವ ಸಿಟಾಡೆಲ್‌ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಸುಭಾಷ್‌ ಎಂಬಾತನೇ ಕೊಲೆಗೀಡಾಗಿರುವ ಕ್ಯಾಶಿಯರ್‌. ಅದೇ ಹೋಟೆಲ್‌ನಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುವ ಅಭಿಷೇಕ್‌ ಈ ಕೃತ್ಯ ಎಸಗಿದ್ದು, ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಕ್ಯಾಶಿಯರ್‌ ಸುಭಾಷ್‌ ಅವರು ಹೋಟೆಲ್‌ನಲ್ಲಿರುವ ಸೋಫಾ ಮೇಲೆ ಮಲಗಿದ್ದರು. ಈ ವೇಳೆ ಅಭಿಷೇಕ್‌ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಆರೋಪಿ ಕುಡಿದಿದ್ದು, ಕುಡಿದ ನಶೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.

Share Post