BengaluruPolitics

ಯತೀಂದ್ರ ವಿಡಿಯೋ ವೈರಲ್‌ ವಿಚಾರ; ಬಿಜೆಪಿ-ಜೆಡಿಎಸ್‌ಗೆ ಕೆಲಸ ಇಲ್ಲ ಎಂದ ಡಿಕೆಶಿ

ಬೆಂಗಳೂರು; ಮಾಜಿ ಶಾಸಕ ಹಾಗೂ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್‌ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದು, ಈ ಕಾರಣಕ್ಕಾಗಿ ಜನ ಸಂಪರ್ಕ ಮಾಡಿದ್ದಾರೆ. ಅವರು ಈ ವೇಳೆ ಸ್ಕೂಲ್‌ಗಳ ರಿಪೇರಿಗಾಗಿ ಬಳಸುತ್ತಿರುವ ಸಿಎಎಸ್‌ಆರ್‌ ಫಂಡ್‌ ವಿಚಾರವಾಗಿ ಮಾತನಾಡಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.

 

ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಬೇರೆ ಏನೂ ಕೆಲಸ ಇಲ್ಲ. ಇದಕ್ಕೆ ಏನೇನೋ ಬಣ್ಣ ಕಟ್ಟುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ಎಲ್ಲಿ ನಡೆಯುತ್ತಿದೆ..? ಅದು ನಿಲ್ಲಿಸಿ ಎಷ್ಟು ದಿನ ಆಯ್ತು ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದಾರೆ. ಸುಮ್ಮನೆ ವಿಪಕ್ಷಗಳ ನಾಯಕರು ಯತೀಂದ್ರ ಅವರನ್ನು ದೊಡ್ಡವರನ್ನಾಗಿ ಮಾಡುತ್ತಿದ್ದಾರೆ. ನಮ್ಮ ಹುಡುಗ ಬೆಳೆಯಲಿ ಬಿಡಿ ಎಂದೂ ಡಿಕೆಶಿ ಹೇಳಿದ್ದಾರೆ.

 

Share Post