BengaluruPolitics

ಹಿರೇಮಗಳೂರು ಕಣ್ಣನ್‌ ಅವರ ತಪ್ಪಿಲ್ಲ, ತಹಸೀಲ್ದಾರ್‌ರಿಂದ ಹಣ ವಸೂಲಿ; ಸಿದ್ದರಾಮಯ್ಯ

ಬೆಂಗಳೂರು; ಕನ್ನಡದ ಅರ್ಚಕ ಎಂದೇ ಖ್ಯಾತರಾಗಿರುವ ಹಿರತೇಮಗಳೂರು ಕಣ್ಣನ್‌ ಅವರಿಗೆ ನೀಡಿದ್ದ ನೋಟಿಸ್‌ ವಿಚಾರ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಹೀಗಿರುವಾಗಲೇ ಸರ್ಕಾರ ನೋಟಿಸ್‌ ವಾಪಸ್‌ ಪಡೆಯಲು ತೀರ್ಮಾನ ಮಾಡಿದೆ. ಇತ್ತ ಸ್ವತಃ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹಿರೇಮಗಳೂರು ಕಣ್ಣನ್‌ ಅವರಿಗೆ ಕಳದ ಹತ್ತು ವರ್ಷಗಳಿಂದ ಹೆಚ್ಚುವರಿ ಹಣ ನೀಡಲಾಗಿದೆ. ಇದು ಕಣ್ಣನ್‌ ಅವರ ತಪ್ಪಲ್ಲ. ಹೆಚ್ಚುವರಿಯಾಗಿ ಪಾವತಿ ಮಾಡಿದ್ದು, ತಹಸೀಲ್ದಾರ್‌ ಅವರ ತಪ್ಪು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಟ್ವೀಟ್‌ನಲ್ಲೇನಿದೆ..? 

===========================

‘ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಾಸು ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಶೀಲ್ದಾರ್ ತಪ್ಪಿದೆ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ಅನ್ನು ಹಿಂಪಡೆಯಲು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಶೀಲ್ದಾರರು, ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ’

ಹೀಗಂತ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

Share Post