Bengaluru

Hijab Row: ನಾಳೆಗೆ ಹಿಜಾಬ್‌ ಅರ್ಜಿ ವಿಚಾರಣೆ ಮುಂದೂಡಿಕೆ-ನ್ಯಾಯಪೀಠದ ಆದೇಶ

ಬೆಂಗಳೂರು: ಫೆಬ್ರವರಿ 5 ರಿಂದ ಹೈಕೋರ್ಟ್ನಲ್ಲಿ ಹಿಜಾಬ್‌ ಅರ್ಜಿ ವಿಚಾರಣೆ ನಡೆಯುತ್ತಿದೆ. ಇಲ್ಲವರೆಗೂ ಇನ್ನೂ ಪ್ರಕರಣ ಇತ್ಯರ್ಥ ಆಗಿಲ್ಲ. ಇಂದೂ ಕೂಡ ಹಿಜಾಬ್‌ ಅರ್ಜಿ ವಿಚಾರಣೆ ನಡೆದಿದ್ದು. ವಾದ/ಪ್ರತಿವಾದಗಳು ನಡೆದಿವೆ. ವಿಚಾರಣೆ ಇನ್ನೂ ಬಾಕಿ ಇರುವ ಕಾರಣದಿಂದಾಗಿ ನಾಳೆ ಮಧ್ಯಾಹ್ನಕ್ಕೆ ಹಿಜಾಬ್‌ ಅರ್ಜಿ ವಿಚಾರಣೆಯನ್ನು ಉಚ್ಛ ನ್ಯಾಯಾಲಯ ಮುಂದೂಡಿಕೆ ಮಾಡಿದೆ.

ಹೈಕೋರ್ಟ್‌ ತ್ರಿಸದಸ್ಯ ಪೀಠದಲ್ಲಿ ನಡೆದ ಅರ್ಜಿ ವಿಚಾರಣೆ ನಾಳೆ ಮುಂದೂಡವಂತೆ ನ್ಯಾಯಪೀಠ ಆದೇಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ, ನ್ಯಾ.ಕೃಷ್ಣ ದೀಕ್ಷಿತ್‌, ನ್ಯಾ ಖಾಜಿ ಜೈಬುನ್ನೀಸಾ ಮಹಿಯುದ್ದೀನ್‌ ಅವರ ಪೀಠವು ಅರ್ಜಿ ಮುಂದೂಡಿದೆ. ನಾಳೆ ಕೂಡ ಅರ್ಜಿ ಪರ ಹಾಗೂ ವಿರೋಧವಾಗಿ ವಕೀಲರು ವಾದ ಮಂಡನೆ ಮಾಡಲಿದ್ದಾರೆ.

Share Post