BengaluruPolitics

ಅಧಿಕಾರಿಗಳ ಮೇಲೆ ಸರ್ಕಾರ ನಿಯಂತ್ರಣ ಕಳೆದುಕೊಂಡಿದೆ: ಸುರ್ಜೇವಾಲ

ತುಮಕೂರು: ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಸರ್ಕಾರ ನಿಯಂತ್ರಣ ಕಳೆದುಕೊಂಡಿದೆ ಎಂದು ಕಾಂಗ್ರೇಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಟೀಕಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಇಂದು ಸುರ್ಜೆವಾಲ ಟಿಕೆಟ್ ಆಕಾಂಕ್ಷಿತರ ಸಭೆ ನಡೆಸಲಿದ್ದಾರೆ,ಸಭೆಗೂ ಮುನ್ನಾ ಮಾಜಿ ಶಾಸಕ ಕೆ ಎನ್ ರಾಜಣ್ಣ ಮನೆಗೆ ಭೇಟಿ ‌ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರವಿದೆ, ರಾಜ್ಯದಲ್ಲಿ ಬಹಿರಂಗವಾಗಿ ಐಎಎಸ್ ಐಪಿಎಸ್ ಅಧಿಕಾರಿಗಳ ಕಿತ್ತಾಟ ನಡೆಯುತ್ತಿದೆ.ಸರ್ಕಾರ ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದೆ ಎಂದರು.

ಅಶ್ವತ್ಥ ನಾರಾಯಣರನ್ನ ಜೈಲಿಗೆ ಕಳುಹಿಸಿ. ಜೆಪಿ ನಡ್ಡಾಗೆ ಸವಾಲು.

ಸಚಿವ ಅಶ್ವತ್ಥ ನಾರಾಯಣ ಸಿದ್ದರಾಮಯ್ಯರನ್ನ‌ ಕೊಲೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಎಲ್ಲರನ್ನೂ ಕೊಲೆ ಮಾಡಿ ಅನ್ನಬಹುದು,ಈ ಮೂಲಕ ಬಿಜೆಪಿ ಹಿಂಸೆಯನ್ನ ಪ್ರಚೋದಿಸುತ್ತಿದೆ. ಇಂದು ಜೆಪಿ ನಡ್ಡಾ ಕರ್ನಾಟಕದಲ್ಲೆ ಇದ್ದಾರೆ ಅವರಿಗೆ ನಾನು ಚಾಲೇಂಜ್ ಹಾಕುತ್ತೆನೆ, ಅಶ್ವತ್ಥ ನಾರಾಯಣರನ್ನ ಸಚಿವ ಸಂಪುಟದಿಂದ ವಜಾಗೊಳಿಸಿ ಜೈಲಿಗೆ ಕಳುಹಿಸಿ ಎಂದು ಸವಾಲು ಹಾಕಿದರು.

Share Post