BengaluruCrime

ಚಿನ್ನ ದರೋಡೆ ಪ್ರಕರಣ; ದೂರು ಕೊಟ್ಟಾತನೇ ಅರೆಸ್ಟ್‌ ಆದ..!

ಬೆಂಗಳೂರು; ಇತ್ತೀಚೆಗೆ ಬೆಂಗಳೂರಿನ ಕೆಆರ್‌ ಮಾರ್ಕೆಟ್‌ನ ಫ್ಲೈಓವರ್‌ ಮೇಲೆ ಸುಮಾರು ನಾಲ್ಕು ಕೆಜಿಯಷ್ಟು ಚಿನ್ನ ದರೋಡೆಯಾಗಿತ್ತು. ಅದರ ಮೌಲು 1.70 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಮಾಲೀಕ ಚಿನ್ನವನ್ನು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಚಿನ್ನ ದೋಚಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಆದ್ರೆ ವಿಚಾರಣೆ ನಡೆಸಿದ ಪೊಲೀಸರು ದೂರು ನೀಡಿದಾತನನ್ನೇ ಬಂಧಿಸಿದ್ದಾರೆ. ಯಾಕಂದ್ರೆ ಆತ ಸುಮ್ಮನೆ ಕತೆ ಕಟ್ಟಿದ್ದ ಅನ್ನೋದು ತನಿಖೆ ವೇಳೆ ಬಯಲಾಗಿದೆ.

ಇನ್ಶ್ಯೂರೆನ್ಸ್‌ ಪಡೆಯುವುದಕ್ಕಾಗಿ ಚಿನ್ನದ ಅಂಗಡಿ ಮಾಲೀಕ ಚಿನ್ನ ದರೋಡೆಯ ಕಥೆ ಕಟ್ಟಿದ್ದಾನೆ. ಆದ್ರೆ ತನಿಖೆ ವೇಳೆ ಪೊಲೀಸರಿಗೆ ವಿಚಾರ ಗೊತ್ತಾಗಿದ್ದು, ಇದೀಗ ಚಿನ್ನದ ಅಂಗಡಿ ಮಾಲೀಕ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿದೆ.

Share Post