BengaluruCrime

ಗ್ಯಾಸ್‌ಗೀಸರ್‌ ತಂದ ಅವಾಂತರ; ಮದುವೆಯಾಗಬೇಕಿದ್ದ ಜೋಡಿ ಸಾವು..!

ಬೆಂಗಳೂರು; ಸ್ನಾನ ಮಾಡುತ್ತಿರುವಾಗ ಗ್ಯಾಸ್‌ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ಯುವಕ-ಯುವತಿ ಸಾವನ್ನಪ್ಪಿರುವ ಘಟನೆ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿಕ್ಕಜಾಲದ ತರಬನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ಜೋಡಿ ಸ್ನಾನ ಮಾಡುತ್ತಿರುವಾಗಲೇ ಸಾವನ್ನಪ್ಪಿದ್ದಾರೆ.

ಗುಂಡ್ಲುಪೇಟೆ ಮೂದ ಚಂದ್ರಶೇಖರ್‌ ಹಾಗೂ ಗೋಕಾಕ್‌ ಮೂಲದ ಸುಧಾರಾಣಿ ಮೃತಪಟ್ಟವರು. ಜೂನ್‌ ಹತ್ತರಂದು ಸಂಜೆ ಸುಧಾರಾಣಿ ಅವರು ಚಂದ್ರಶೇಖರ್‌ ರೂಮ್‌ಗೆ ಬಂದಿದ್ದಾರೆ. ಇಬ್ಬರೂ ಸೇರಿ ಸ್ನಾನಕ್ಕೆ ಹೋಗಿದ್ದಾರೆ. ಈ ವೇಳೆ ಗ್ಯಾಸ್‌ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿದೆ. ಇದ್ರಿಂದ ಇಬ್ಬರೂ ಅಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಮಾರನೆಯ ದಿನ ಮನೆಯ ಮಾಲೀಕರು ಪರಿಶೀಲನೆ ಮಾಡಿದಾಗ ವಿಷಯ ಗೊತ್ತಾಗಿದೆ. ಬಾಗಿಲು ಒಡೆದು ಎರಡೂ ಮೃತದೇಹಗಳನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ಇಬ್ಬರ ಮದುವೆ ಫಿಕ್ಸ್‌ ಆಗಿತ್ತು ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳಲ್ಲಿ ಇಬ್ಬರ ಮದುವೆ ಇತ್ತು ಎಂದು ತಿಳಿದುಬಂದಿದೆ.

Share Post