BengaluruDistrictsPolitics

ಅಧಿಕಾರ ಬಂದಾಕ್ಷಣ ಗ್ಯಾರೆಂಟಿಗಳ ಜಾರಿ; ಚಾಮುಂಡಿ ಎದುರು ಸಿದ್ದು, ಡಿಕೆಶಿ ಶಪಥ

ಮೈಸೂರು; ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ನಾವು ಘೋಷಣೆ ಮಾಡಿರುವ ಗ್ಯಾರೆಂಟಿಗಳನ್ನು ಜಾರಿ ಮಾಡಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಶಪಥ ಮಾಡಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಒಟ್ಟಿಗೆ ಹೋಗಿದ್ದ ನಾಯಕರು, ಚಾಮುಂಡಿ ಮುಂದೆ ಶಪಥ ಮಾಡಿದ್ದಾರೆ.

ನಾಳೆ ಮತದಾನದ ಹಿನ್ನೆಲೆಯಲ್ಲಿ ಎಲ್ಲಾ ನಾಯಕರು ದೇವಸ್ಥಾನಗಳಿಗೆ ಭೇಟಿ  ನೀಡುತ್ತಿದ್ದಾರೆ. ಇತ್ತ ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್‌ ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ್ದರು. ಇದೀಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರೂ ಚಾಮುಂಡಿಯ ದರ್ಶನ ಪಡೆದಿದ್ದಾರೆ.

ಕಾಂಗ್ರೆಸ್‌ ನೀಡಿರುವ ಭರವಸೆಗಳೆಲ್ಲಾ ಸುಳ್ಳು ಎಂದು ಬಿಜೆಪಿ ಹೇಳುತ್ತಿದೆ. ಹೀಗಾಗಿ ಜನರಲ್ಲಿ ನಂಬಿಕೆ ಮೂಡಿಸುವ ಸಲುವಾಗಿಯೋ ಏನೋ ಇಬ್ಬರೂ ನಾಯಕರು ಚಾಮುಂಡಿಯ ಮುಂದೆ ಗ್ಯಾರೆಂಟಿ ಕಾರ್ಡ್‌ಗಳನ್ನು ಹಿಡಿದು, ನಾವು ಅಧಿಕಾರಿ ಬಂದ ಕೂಡಲೇ ಈ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಶಪಥ ಮಾಡಿದ್ದಾರೆ.

Share Post