Bengaluru

ತಾಂಬೂಲ ಪ್ರಶ್ನೆ ವಿಚಾರ; ಭವಿಷ್ಯ ಹೇಳುವವರನ್ನು ಬಂಧಿಸಿ; ಡಿ.ಕೆ.ಶಿವಕುಮಾರ್‌ ಆಗ್ರಹ

ಬೆಂಗಳೂರು; ಮಂಗಳೂರಿನಲ್ಲಿ ತಾಂಬೂಲ ಪ್ರಶ್ನೆ ನೋಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು ಭವಿಷ್ಯ ಹೇಳೊರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದು ಭಾವಾನಾತ್ಮಕ ವಿಚಾರ, ರಾಜ್ಯವನ್ನು ಸಾಯಿಸುತ್ತಿದ್ದಾರೆ. ಶಾಸ್ತ್ರ, ಭವಿಷ್ಯ ಹೇಳುವವರು, ಅವರ ಸ್ವಂತಕ್ಕೆ, ಮನೆಯಲ್ಲಿ ಏನಾದರೂ ಮಾಡಿಕೊಳ್ಳಲಿ. ಆದರೆ ಸಾರ್ವಜನಿಕವಾಗಿ ಹೇಳುವವರ ವಿರುದ್ಧ ಕ್ರಮವಾಗಬೇಕು. ಜಿಲ್ಲಾಧಿಕಾರಿ, ಎಸ್ಪಿ ಮಧ್ಯೆ ಪ್ರವೇಶ ಮಾಡಬೇಕು. ಸರ್ಕಾರ ಕೂಡಾ ಮಧ್ಯೆ ಪ್ರಚೇಶ ಮಾಡಿ ತಾಂಬೂಲ ಪ್ರಶ್ನೆ ಹಾಕಿದವರ ವಿರುದ್ಧ ಕೇಸ್‌ ಜಡಿಯಬೇಕೆಂದು ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು.

Share Post