BengaluruPolitics

ಸೋನಿಯಾರನ್ನು ವಿಷಕನ್ಯೆ ಎಂದು ಯತ್ನಾಳ್‌ ವಿರುದ್ಧ ಡಿಕೆಶಿ ಆಕ್ರೋಶ

ಬೆಂಗಳೂರು; ಸೋನಿಯಾಗಾಂಧಿಯವರನ್ನು ವಿಷ ಕನ್ಯೆ ಎಂದು ಕರೆದ ಬಸನಗೌಡ ಪಾಟೀಲ್‌ಯತ್ನಾಳ್‌ ಅವರನ್ನು ವಜಾ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಯತ್ನಾಳ್‌ ಅವರ ಹೇಳಿಕೆ ಖಂಡನಾರ್ಹವಾದುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಸೋನಿಯಾ ಗಾಂಧಿ ನಮ್ಮ ನಾಯಕಿ. ಅವರು ಇಲ್ಲಿ ಹುಟ್ಟದೇ ಹೋದರೂ ದೇಶಕ್ಕಾಗಿ ಹಲವಾರು ತ್ಯಾಗಗಳನ್ನು ಮಾಡಿದ್ದಾರೆ. ಪ್ರಧಾನಿ ಸ್ಥಾನದ ಅವಕಾಶ ಸಿಕ್ಕಾಗಲೂ ಅದನ್ನು ನಿರಾಕರಣೆ ಮಾಡಿ ದೇಶದಕ್ಕಾಗಿ ದುಡಿದ್ದಾರೆ. ಅತ್ತೆ, ಗಂಡನನ್ನು ದೇಶಕ್ಕಾಗಿ ಕಳೆದುಕೊಂಡಿದ್ದಾರೆ. ಅಂತವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಡಿಕೆಶಿ ಹೇಳಿದ್ದಾರೆ.

Share Post