BengaluruCinema

ಮೀಸೆ ತೆಗೆದ ನಿರ್ದೇಶಕ ಯೋಗರಾಜ್‌ ಭಟ್‌; ಕಾರಣ ಏನು ಗೊತ್ತಾ..?

ಬೆಂಗಳೂರು; ಚಿತ್ರ ನಿರ್ದೇಶಕ ಯೋಗರಾಜ್‌ ಭಟ್‌ ಅವರು ಮೀಸೆ ತೆಗೆದಿದ್ದಾರೆ. ಅವರು ಯಾಕೆ ಮೀಸೆ ತೆಗೆದರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಇದೀಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇದೀಗ ಭಟ್ಟರೇ ಮೀಸೆ ತೆಗೆದಿದ್ದಕ್ಕೆ ಕಾರಣ ಕೊಟ್ಟಿದ್ದಾರೆ.

ಯೋಗರಾಜ್ ಭಟ್ ಅವರು ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಕಾಂಬಿನೇಷನ್ ನಲ್ಲಿ ಸಿನಿಮಾವೊಂದನ್ನು ಮಾಡ್ತಿದ್ದಾರೆ. ಇದರಲ್ಲಿ ಯೋಗರಾಜ್‌ ಭಟ್ಟರು ಪ್ರಮುಖ ಹಾಗೂ ಮಹತ್ವದ ಪಾತ್ರವೊಂದನ್ನು ಮಾಡ್ತಿದ್ದಾರೆ. ಅಜ್ಜಯ್ಯ ಎಂಬ ಹೆಸರಿನ ಪಾತ್ರ ಮಾಡುವುದಕ್ಕಾಗಿಯೇ ಯೋಗರಾಜ್‌ ಭಟ್ಟರು ಗಡ್ಡ ತೆಗೆದಿದ್ದಾರೆ. ಈ ಚಿತ್ರಕ್ಕೆ ಅವರೇ ನಿರ್ದೇಶನ ಮಾಡುತ್ತಿದ್ದು, ಜೊತೆ ನಟನೆಯನ್ನೂ ಮಾಡುತ್ತಿದ್ದಾರೆ.

ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ವಿಚಿತ್ರವಾಗಿರುವಂಥ ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ‘K ಕರಟಕ D ದಮನಕ’ ಎಂದು ವಿಭಿನ್ನ ಶೀರ್ಷಿಕೆ ಇಟ್ಟಿದ್ದಾರೆ.

Share Post