BengaluruPolitics

ಕುಮಾರಸ್ವಾಮಿ ಕೂಡಾ ಹಣ ಪಡೆದೇ ವರ್ಗಾವಣೆ ಮಾಡಿದ್ದರಾ..?; ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು; ಕುಮಾರಸ್ವಾಮಿಯವರು ಯಾವಾಗಲೂ ಹಿಟ್‌ ಅಂಡ್‌ ರನ್‌ ರಾಜಕಾರಣ ಮಾಡುತ್ತಾರೆ. ಅವರು ಯಾವ ಪ್ರಕರಣವನ್ನೂ ತಾತ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ವರ್ಗಾವಣೆ ದಂಧೆ ಬಗ್ಗೆ ಕುಮಾರಸ್ವಾಮಿ ಆರೋಪ ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರ ಅವಧಿಯಲ್ಲಿ ವರ್ಗಾವಣೆಗಳು ನಡೆದಿರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಹೊಸ ಸರ್ಕಾರ ಬಂದಾಗ ವರ್ಗಾವಣೆಗಳು ನಡೆಯುವುದು ಕಾಮನ್‌. ಎಲ್ಲಾ ಸರ್ಕಾರಗಳು ಬಂದಾಗಲೂ ವರ್ಗಾವಣೆಗಳು ನಡೆಯುತ್ತವೆ. ಹಾಗಂತ ಅದನ್ನು ದಂಧೆ ಎಂದು ಹೇಳೋದಕ್ಕೆ ಆಗುತ್ತಾ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಕುಮಾರಸ್ವಾಮಿ ಸಿಎಂ ಆದಾಗಲೂ ವರ್ಗಾವಣೆಗಳು ನಡೆದಿದ್ದವು. ಹಾಗಾದರೆ ಅವರೂ ಹಣ ಪಡೆದೇ ವರ್ಗಾವಣೆ ಮಾಡಿದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ.

Share Post