Bengaluru

ಹಿಜಾಬ್‌ ವಿಚಾರ ದಾರಿ ತಪ್ಪುತ್ತಿದೆ; ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ಹಿಜಾಬ್‌ ವಿಚಾರ ದಾರಿ ತಪ್ಪುತ್ತಿದೆ. ಇದನ್ನು ಪ್ರಾರಂಭದಲ್ಲೇ ಚಿವುಟಿ ಹಾಕಬೇಕಿತ್ತು. ಸರ್ಕಾರ ಯಾಕೆ ಆ ಕೆಲಸ ಮಾಡಲಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹಿಜಾಬ್‌ ವಿಚಾರದಲ್ಲಿ ಕೋರ್ಟ್‌ ಆದೇಶಕ್ಕೂ ಬಗ್ಗಲ್ಲ ಎಂದು ಹೆಣ್ಣು ಮಕ್ಕಳು ಹೇಳಿಕೆ ಕೊಡ್ತಿದ್ದಾರೆ. ಹೀಗೇ ಹರಡಲು ಬಿಟ್ಟರೆ ಮುಂದೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಸದನದಲ್ಲಿ ನಡೆಯುತ್ತಿರುವ  ಗದ್ದಲದ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ದೊಡ್ಡವರು ಏನೋ ಹೇಳ್ತಾರೆ ಅಂದ್ರೆ ಗೌರವ ಇರೋದು. ಆಗ ನಾನು ಯಾವತ್ತೂ ಸದನದ ಬಾವಿಯೊಳಗೆ ಹೋಗಲೇ ಇಲ್ಲ. ವಿರೋಧ ಪಕ್ಷದ ನಾಯಕನಾಗಿ ಅಭಿಪ್ರಾಯ ಹೇಳ್ತಾ ಇದ್ದೆ. ಕೆಲವು ಸಲಹೆಗಳನ್ನು ಕೊಡುತ್ತಿದ್ದೆ. ನಾನು ಒಂದು ದಿನವೂ ಕೆಟ್ಟ ಪದಗಳನ್ನು ಬಳಸಲಿ;;. ಈಗ ಸದನ ತೀರಾ ಕೆಳಮಟ್ಟಕ್ಕೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Share Post