BengaluruPolitics

ಮಕ್ಕಳ ಬ್ಯಾಗ್‌ ಹೊರೆ ಕಡಿಮೆ ಮಾಡಲು ನಿರ್ಧಾರ; ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು; ಶಾಲಾ ಮಕ್ಕಳ ಬ್ಯಾಗ್‌ ಹೊರೆ ಕಡಿಮೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು.

ಮೊಟ್ಟೆ ಭಾಗ್ಯವನ್ನು ವಿಸ್ತರಿಸುವಂತೆ ನಾನು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮವಿ ಮಾಡಿದ್ದೆ. ಈ ಮೊದಲು ವಾರಕ್ಕೆ ಒಂದು ಮೊಟ್ಟೆ ಮಾತ್ರ ನೀಡಲಾಗುತ್ತಿತ್ತು. ಈಗ ವಾರಕ್ಕೆ ಎರಡು ಮೊಟ್ಟೆ ಕೊಡಲು ತೀರ್ಮಾನವಾಗಿದೆ. ಇದರಿಂದಾಗಿ ಒಂದು ಮಗುವಿಗೆ ವಾರ್ಷಕವಾಗಿ 84 ಮೊಟ್ಟೆ ಸಿಗಲಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು. ಈ ವಿಚಾರದಲ್ಲಿ ಎಸ್‌ಡಿಎಂಸಿಯವರಿಗೆ ಎಲ್ಲಾ ಅಧಿಕಾರ ನೀಡಿದ್ದೇವೆ ಎಂದೂ ಸಚಿವ ಮಧು ಬಂಗಾರಪ್ಪ ತಿಳಿಸಿದರು.

 

Share Post