BengaluruCrime

ಪ್ರಿಯಕರನ ಜೊತೆ ಸೇರಿ ಅತ್ತೆಯನ್ನು ಕೊಂದಳು; ಹಾರ್ಟ್‌ ಅಟ್ಯಾಕ್‌ ಎಂದು ಕಥೆ ಕಟ್ಟಿದಳು..!

ಬೆಂಗಳೂರು; ಅಕ್ಟೋಬರ್‌ 10ರಂದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಆಕೆಯ ಸೊಸೆ ಒಂದು ಕಥೆ ಕಟ್ಟಿದ್ದಳು. ಅತ್ತೆ ಹೃದಯಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಳು. ಆದ್ರೆ ಸೊಸೆಯೇ ಅತ್ತೆಯನ್ನು ಕೊಲೆ ಮಾಡಿದ್ದಾಳೆ ಅನ್ನೋದು ಸಾಬೀತಾಗಿದೆ. ಪ್ರಿಯಕರನೊಂದಿಗೆ ಸೇರಿ ಸೊಸೆ ತನ್ನ  ಅತ್ತೆಯನ್ನು ಕೊಲೆ ಮಾಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. 

ರಶ್ಮಿ, ಪುರುಷೋತ್ತಮ್‌ ಹಾಗೂ ಅಕ್ಷಯ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ರಶ್ಮಿ ಈ ಕೊಲೆಯ ರೂವಾರಿ. ಅಂದಹಾಗೆ ಈಕೆ ಲಕ್ಷ್ಮಮ್ಮ ಎಂಬುವವರ ಮಗ ಮಂಜುನಾಥ್‌ನನ್ನು ಮದುವೆಯಾಗಿದ್ದಳು. ಆದ್ರೆ, ಅವರ ಮನೆಯ ಮೇಲಿನ ಮಹಡಿಯಲ್ಲಿ ಬಾಡಿಗೆಗಿದ್ದ ಅಕ್ಷಯ್‌ ಜೊತೆ ರಶ್ಮಿಗೆ ಲವ್ವಿಡವ್ವಿ ಶುರುವಾಗಿತ್ತು. ಇನ್ನೊಂದೆಡೆ ಮನೆಯ ಹಣದ ವ್ಯವಹಾರ ತಾನೇ ನೋಡಿಕೊಳ್ಳಬೇಕು ಅಂತ ರಶ್ಮಿ ಬಯಸಿದ್ದಳು. ಆದ್ರೆ ಅತ್ತೆ ಲಕ್ಷ್ಮಮ್ಮ ಇದಕ್ಕೆ ಒಪ್ಪುತ್ತಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು. ಕೊನೆಗೆ ಒಂದು ದಿನ ಲಕ್ಷ್ಮಮ್ಮ ಸಾವನ್ನಪ್ಪಿದ್ದಳು. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ರಶ್ಮಿ ಕಥೆ ಕಟ್ಟಿದ್ದಳು.

ಆದ್ರೆ ಪೊಲೀಸರು ತನಿಖೆ ಕೈಗೊಂಡಾಗ ರಶ್ಮಿ ಬಗ್ಗೆ ಪೊಲೀಸರಿಗೆ ಅನುಮಾನ ಉಂಟಾಗಿತ್ತು. ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ತಾನೇ ಪ್ರಿಯಕರ ಅಕ್ಷಯ್‌ ಹಾಗೂ ಆತನ ಸ್ನೇಹಿತ ಪುರುಷೋತ್ತಮನ ಜೊತೆ ಸೇರಿಯನ್ನು ಅತ್ತೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ.

 

Share Post