BengaluruCrimeNational

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ; ತಲೆಮರೆಸಿಕೊಂಡಿದ್ದ ಅರಾಫತ್‌ ಅರೆಸ್ಟ್‌

ಬೆಂಗಳೂರು; ಮಂಗಳೂರಿನ ಬಳಿ ಕಳೆದ ವರ್ಷ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಆಗಿತ್ತು. ಉಗ್ರನೊಬ್ಬ ಕುಕ್ಕರ್‌ನಲ್ಲಿ ಬಾಂಬಿಟ್ಟು ಬ್ಲಾಸ್ಟ್‌ ಮಾಡಲು ಆಟೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಅದು ಬ್ಲಾಸ್ಟ್‌ ಆಗಿತ್ತು. ಇನ್ನು ಶಿವಮೊಗ್ಗದಲ್ಲೂ ಇಂತಹದ್ದೊಂದು ಟ್ರಯಲ್‌ ಬ್ಲಾಸ್ಟ್‌ ನಡೆದಿತ್ತು. ಇದಕ್ಕೆಲ್ಲಾ ಸೂತ್ರದಾರ ಐಸಿಸ್‌ ಉಗ್ರ ಅರಾಫತ್‌ ಅಲಿ. ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಈತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಐಸಿಸ್‌ ಉಗ್ರ ಅರಾಫತ್‌ ಅಲಿ 2020ರಿಂದ ಕೀನ್ಯಾದ ನೈರೋಬಿಯಾದಲ್ಲಿ ತಲೆಮರೆಸಿಕೊಂಡಿದ್ದ. ಆದ್ರೆ ನಿನ್ನೆ ಆತ ಅಲ್ಲಿಂದ ದೆಹಲಿಗೆ ಬಂದಿದ್ದಾನೆ. ಈ ಮಾಹಿತಿ ಆಧರಿಸಿ ಎನ್‌ಐಎ ಅಧಿಕಾರಿಗಳು ದಾಳಿ ಅರಾಫತ್‌ನನ್ನು ಬಂಧಿಸಿದ್ದಾರೆ.

ಆರೋಪಿ ಅರಾಫತ್‌, ಶಾರೀಕ್‌ ಹಾಗೂ ಮಾಜ್‌ ಮುನೀರ್‌ಗೆ ಉಗ್ರವಾದದ ಪಾಠ ಹೇಳುತ್ತಿದ್ದ. ಮೊದಲ ಟ್ರೈನಿಂಗ್‌ ಆಗಿ ಶಿವಮೊಗ್ಗದಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆಸಲಾಗಿತ್ತು. ನಂತರ ಮಂಗಳೂರಿನ ಕದ್ರಿ ದೇವಸ್ಥಾನ ಬ್ಲಾಸ್ಟ್‌ ಟಾರ್ಗೆಟ್‌ ಆಗಿತ್ತು. ಆದ್ರೆ ದಾರಿ ಮಧ್ಯೆಯೇ ಆಟೋದಲ್ಲೇ ಕುಕ್ಕರ್‌ ಬ್ಲಾಸ್ಟ್‌ ಆಗಿತ್ತು. ಅರಾಫತ್‌ ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ನಿವಾಸಿ ಎಂದು ತಿಳಿದುಬಂದಿದೆ.

 

Share Post