BengaluruPolitics

ಬಿಜೆಪಿ ನಾಯಕ ಪ್ರತಿಭಟನೆಗೆ ಕಾಂಗ್ರೆಸ್‌ ಠಕ್ಕರ್‌; ಪೋಸ್ಟರ್‌ ಮೂಲಕ ತಿರುಗೇಟು!

ಬೆಂಗಳೂರು; 31ವರ್ಷ ಹಳೆಯ ಪ್ರಕರಣದ ಸಂಬಂಧ ಕರಸೇವಕ ಶ್ರೀಕಾಂತ್‌ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ಮುಂದುವರೆಸಿದ್ದಾರೆ. ‘ನಾನು ಕರಸೇವಕ.. ನನ್ನನ್ನೂ ಬಂಧಿಸಿ’ ಎಂದು ಅಭಿಯಾನ  ನಡೆಸಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಕೂಡಾ ಪೋಸ್ಟರ್‌ ಮೂಲಕ ಠಕ್ಕರ್‌ ನೀಡಿದೆ. ಪೊಲೀಸ್‌ ಠಾಣೆಗಳ ಮುಂದೆ ಕುಳಿತು ಪೋಸ್ಟರ್‌ ಹಿಡಿದು ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರ ಫೋಟಗಳನ್ನು ಎಡಿಟ್‌ ಮಾಡಿರುವ ಕಾಂಗ್ರೆಸ್‌, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಬಿಜೆಪಿ ನಾಯಕರು ನಿಜವಾಗಿಯೂ ಇಂತಹ ಪೋಸ್ಟರ್‌ ಹಿಡಿದು ಕೂರಬೇಕು ಎಂದು ಬರೆಯಲಾಗಿದೆ. 

ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಯವರು ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಈ ಫೋಟೋ ಬಳಸಿಕೊಂಡಿರುವ ಕಾಂಗ್ರೆಸ್‌, ಸಿ.ಟಿ.ರವಿಗೆ ಠಕ್ಕರ್‌ ಕೊಟ್ಟಿದೆ. ‘ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ.. ನನ್ನನ್ನೂ ಬಂಧಿಸಿ’ ಎಂದು ಸಿ.ಟಿ.ರವಿ ಹಿಡಿದಿರುವ ಪೋಸ್ಟರ್‌ ಅನ್ನು ತಿದ್ದಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕೈಯಲ್ಲಿ ಹಿಡಿದಿರುವ ಪೋಸ್ಟರ್‌ ಮೇಲೆ, ‘ನಾನು ಆರ್‌ಟಿಜಿಎಸ್‌ ಮೂಲಕ ಲಂಚ ಪಡೆದಿದ್ದೇನೆ. 40,000 ಕೋಟಿಯ ಅಕ್ರಮದಲ್ಲಿ ಪಾಲುದಾರ.. ನನ್ನನ್ನೂ ಬಂಧಿಸಿ’ ಎಂದು ಬರೆಯಲಾಗಿದೆ.

ಹೀಗೆ ಈಶ್ವರಪ್ಪ, ಪ್ರತಾಪ ಸಿಂಹ ಅವರ ಫೋಟೋಗಳನ್ನು ಕೂಡಾ ತಿದ್ದಲಾಗಿದೆ.

 

Share Post