Bengaluru

ಕಾಂಗ್ರೆಸ್‌ ಪ್ರತಿಭಟನೆ; ಇದು ರಾಷ್ಟ್ರ ವಿರೋಧಿ ಸಂಚು – ಬಿಜೆಪಿ

ಬೆಂಗಳೂರು; ರಾಹುಲ್‌ ಗಾಂಧಿ ಹಾಗೂ ಸೋನಿಯಾಗಾಂಧಿಗೆ ಇಡಿ ನೋಟಿಸ್‌ ನೀಡಿರುವುದಕ್ಕೆ ಕಾಂಗ್ರೆಸ್‌ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದೆ. ಇದು ಕಾಂಗ್ರೆಸ್‌ ಪ್ರೇರಿತ ರಾಷ್ಟ್ರ ವಿರೋಧಿ ಸಂಚು ಎಂದು ಆಪಾದಿಸಿದೆ.

ಬಿಜೆಪಿ ಟ್ವೀಟ್‌

ಬಾಲ‌ ಮುದುರಿಕೊಂಡು ಕುಳಿತಿದ್ದ ನಗರ ನಕ್ಸಲರು, ಶಾಂತಿದೂತರು, ಸಿಎಎ ವಿರೋಧಿ ಹೋರಾಟಗಾರರು ಈಗ ಒಮ್ಮೆಲೇ ಎದ್ದು ನಿಂತಿದ್ದಾರೆ. #EDNotice ಬಳಿಕ ಈ ಘಟನೆ ನಡೆಯುತ್ತಿದೆ. ಹಾಗಾದರೆ ಇದು ಕಾಂಗ್ರೆಸ್ ಪ್ರೇರಿತ ರಾಷ್ಟ್ರ ವಿರೋಧಿ ಸಂಚಲ್ಲವೇ?

 

ಶ್ರೀರಾಮುಲು ಟ್ವೀಟ್‌

“ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ”ಎಂಬ ಗಾದೆಯಂತೆ ಶ್ರೀಮತಿ ಸೋನಿಯಾ ಗಾಂಧಿ & ರಾಹುಲ್ ಗಾಂಧಿಗೆ ಇಡಿ ನೋಟಿಸ್ ಜಾರಿ ಆಗಿದ್ದು ದೆಹಲಿಯಲ್ಲಿ, ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ಬೆಂಗಳೂರಿನಲ್ಲಿ.

ಅಲ್ಲೆಲ್ಲೋ ನೋಟಿಸ್ ಜಾರಿ ಆದರೆ, ಬೆಂಗಳೂರಿನ ಜನಸಾಮಾನ್ಯರೇಕೆ ಪರಿತಪಿಸಬೇಕು? ಕಾಂಗ್ರೆಸ್ ಬೇಕೆಂದೇ ಈ ಕುಚೇಷ್ಟೆ ಮಾಡುತ್ತಿದೆ.

Share Post