BengaluruCrimeSports

ಕ್ಷುಲ್ಲಕ ವಿಚಾರಕ್ಕೆ ಅಥ್ಲೀಟ್‌ ಮೇಲೆ ಹಲ್ಲೆ ಮಾಡಿ ಕೋಚ್‌ ಪತ್ನಿ!

ಬೆಂಗಳೂರು; ಕ್ಷುಲ್ಲಕ ವಿಚಾರಕ್ಕೆ ಕೋಚ್‌ ಪತ್ನಿ ಹಾಗೂ ಅಥ್ಲಿಟ್‌ ನಡುವೆ ವಾಗ್ಯುದ್ಧ ನಡೆದಿದೆ. ಕೋಚ್‌ ಪತ್ನಿ ಶ್ವೇತಾ ಎಂಬುವವರು ಅಥ್ಲೀಟ್‌ ಬಿಂದುರಾಣಿ ಮೇಲೆ ಹಲ್ಲೆ ಮಾಡಿರುವ ಹಾಗೂ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಈಗ ವೈರಲ್‌ ಆಗುತ್ತಿದೆ. 

ಖಾಸಗಿ ಕಾರ್ಯಕ್ರಮದ ವಿಡಿಯೋ ವಾಟ್ಸಪ್‌ನಲ್ಲಿ ಹಂಚಿಕೊಂಡ ಕಾರಣಕ್ಕಾಗಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.  ಕಂಠೀರವ ಕ್ರೀಡಾಂಗಣಕ್ಕೆ ಬಂದ ಶ್ವೇತಾ, ಬಿಂದುರಾಣಿ ಎಂಬ ಅಥ್ಲಿಟ್  ಪ್ರಾಕ್ಟೀಸ್‌ ಮಾಡುವಾಗ ಗಲಾಟೆ ತೆಗೆದಿದ್ದಾರೆ. ಚಪ್ಪಲಿ ತೋರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಥ್ಲಿಟ್ ಬಿಂದುರಾಣಿ, ಕೋಚ್‌ಗಳ ವಾಟ್ಸಪ್ ಗ್ರೂಪ್‌ನಲ್ಲಿ ಖಾಸಗಿ ಕಾರ್ಯಕ್ರಮವೊಂದರ ವೀಡಿಯೋ ಶೇರ್ ಮಾಡಿದ್ದೆ. ಆ ವಿಡಿಯೋದಲ್ಲಿ ತಪ್ಪು ಮಾಹಿತಿ ಕೊಟ್ಟಿದ್ದೀಯಾ ಅಂತ ಕೋಚ್ ಯತೀಶ್ ಪತ್ನಿ ಆರೋಪ ಮಾಡಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗ್ರೂಪ್‌ನಲ್ಲೇ ಅವರು ಪ್ರಶ್ನೆ ಮಾಡಿದ್ದರು. ನಾನು ಅಲ್ಲೇ ಸ್ಪಷ್ಟನೆ ಕೊಡದೆ ನೇರವಾಗಿ ಕರೆ ಮಾಡಿದೆ. ಆದ್ರೆ ಕೆಲವೇ ನಿಮಿಷಗಳಲ್ಲಿ ಕಾಲ್‌ ಕಟ್‌ ಆಯ್ತು. ಇದ್ರಿಂದಾಗಿ ನಾನು ಸುಮ್ಮನಾಗಿದ್ದೆ. ಆದ್ರೆ ಬೆಳಗ್ಗೆ ಬಂದು ರಾದ್ಧಾಂತ ಮಾಡಿದ್ದಾರೆ ಎಂದು ಬಿಂದು ರಾಣಿ ಆರೋಪ ಮಾಡಿದ್ದಾರೆ.

ಖೇಲ್‌ರತ್ನ ಪ್ರಶಸ್ತಿ ಸಂಬಂಧ ಪೋಸ್ಟ್ ಮಾಡಿಕೊಂಡಿದ್ದರು. ಈ ಬಗ್ಗೆ ನನ್ನ ಗಂಡ ಯತೀಶ್ ಬಿಂದುಗೆ ವಾಟ್ಸಾಪ್‌ ಗ್ರೂಪ್‌ನಲ್ಲಿಯೇ ಪ್ರಶ್ನೆ ಮಾಡಿದ್ದರು. ಆದ್ರೆ ಉತ್ತರ ಕೊಡದೆ ಆಕೆಯ ಗಂಡನ ಕಡೆಯಿಂದ ನನ್ನ ಗಂಡನಿಗೆ ರಾತ್ರಿ ಹತ್ತು ಗಂಟೆಗೆ ಕರೆ ಮಾಡಿಸಿ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ನಾನು ಬಂದು ಪ್ರಶ್ನೆ ಮಾಡಿದೆ ಎಂದು ಶ್ವೇತಾ ಸಮಜಾಯಿಷಿ ಕೊಟ್ಟಿದ್ದಾರೆ.

 

Share Post