BengaluruPolitics

ಸಿಎಂ ಸಿದ್ದರಾಮಯ್ಯರನ್ನು ಪೊಲೀಸರು ಒದ್ದು ಜೈಲಿಗೆ ಹಾಕಿದ್ದರಂತೆ..!

ಬೆಂಗಳೂರು; ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಾಗ ಸಿದ್ದರಾಮಯ್ಯ ಅವರನ್ನು ಪೊಲೀಸರು ಒದ್ದು ಜೈಲಿಗೆ ಹಾಕಿದ್ದರಂತೆ. ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ. ನೆಲಮಂಗಲದ ಕ್ಷೇಮವನದಲ್ಲಿ ನಡೆಯುತ್ತಿರುವ ನೂತನ ಶಾಸಕರಿಗೆ ತರಬೇತಿ ಶಿಬಿರದಲ್ಲಿ ಅವರು ಹಲವು ವಿವಾರಗಳನ್ನು ಹಂಚಿಕೊಂಡಿದ್ದಾರೆ.

ನಾನು ತುರ್ತು ಪರಿಸ್ಥಿತಿಯನ್ನು ವಿರೋಧ ಮಾಡಿದ್ದೆ. ಸೈಯಾಜಿರಾವ್‌ ರಸ್ತೆಯಲ್ಲಿ ಟೇಬಲ್‌ ಹಾಕಿಕೊಂಡು ಭಾಷಣ ಕೂಡಾ ಮಾಡಿದ್ದೆ. ಈ ವೇಳೆ ಪೊಲೀಸರು ಒಂದು ದಿನ ಜೈಲಿಗೆ ಹಾಕಿದ್ದರು ಎಂದು ಸಿದ್ದರಾಮಯ್ಯ ಹೇಳಿದರು. ಇನ್ನು ಇದೇ ವೇಳೆ ಹುಮ್ನಾಬಾದ್‌ ಶಾಸಕ ಸಿದ್ದು ಪಾಟೀಲ್‌ ಅವರು ಸಿದ್ದರಾಮಯ್ಯ ಅವರಿಗೆ ನೀವು ಯಾಕೆ ಮೊಬೈಲ್‌ ಬಳಸೋದಿಲ್ಲ ಎಂದು ಪ್ರಶ್ನೆ ಮಾಡಿದರು. ಮೊದಲು ಮೊಬೈಲ್‌ ಬಂದಾಗ ಆರು ತಿಂಗಳು ಇಟ್ಟುಕೊಂಡಿದ್ದೆ. ಕೆಲವರು ಮಧ್ಯರಾತ್ರಿಯಲ್ಲೆಲ್ಲಾ ಕರೆ ಮಾಡ್ತಿದ್ರು, ಕುಡಿದು ಫೋನ್‌ ಮಾಡ್ತಿದ್ರು. ಅದಕ್ಕೇ ಮೊಬೈಲ್‌ ಎಸೆದುಬಿಟ್ಟೆ. ಈ ಪಿಎಗಳ ನಂಬರ್‌ ಕೊಡ್ತೀನಿ, ಅವರ ನಂಬರ್‌ನಿಂದಲೇ ಕಾಲ್‌ ಮಾಡ್ತೀನಿ ಎಂದು ಸಿಎಂ ಹೇಳಿದರು.

ಇನ್ನು ಕೇವಲ 63 ಸಾವಿರ ರೂಪಾಯಿ ಖರ್ಚು ಮಾಡಿ ಚುನಾವಣೆ ಗೆದ್ದ ವಿಚಾರವನ್ನೂ ಶಾಸಕರಿಗೆ ತಿಳಿಸಿದರು.

Share Post