Bengaluru

ಹೈಕಮಾಂಡ್‌ ಸೂಚನೆ ನೀಡಿಲ್ಲ; ಈಶ್ವರಪ್ಪರದ್ದು ಸ್ವಯಂಪ್ರೇರಿತ ನಿರ್ಧಾರ – ಸಿಎಂ

ಬೆಂಗಳೂರು; ಸಂಜೆ ಈಶ್ವರಪ್ಪ ಅವರು ಕರೆ ಮಾಡಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಹೈಕಮಾಂಡ್‌ ಈಶ್ವರಪ್ಪ ಅವರಿಗೆ ರಾಜೀನಾಮೆ ನೀಡಲು ಸೂಚನೆ ನೀಡಿಲ್ಲ. ಅವರೇ ಸ್ವಯಂ ಪ್ರೇರಿತವಾಗಿ ನಿರ್ಧಾರ ಕೈಗೊಂಡಿದ್ದಾರೆ. ನಾಳೆ ಸಂಜೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜೀನಾಮೆಗೆ ಹೈಕಮಾಂಡ್‌ ಒತ್ತಡ ಹೇರಿಲ್ಲ. ಬದಲಾಗಿ, ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ನಾನು ತಪ್ಪು ಮಾಡಿಲ್ಲ. ತನಿಖೆಯಾಗಲಿ. ನಾನು ಆರೋಪಮುಕ್ತನಾಗುವವರೆಗೂ ನನಗೆ ಅಧಿಕಾರ ಬೇಡ ಎಂದು ಈಶ್ವರಪ್ಪ ಹೇಳಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Share Post