Bengaluru

ನಿರಾಶಾದಾಯಕ ಬಜೆಟ್‌ ಎಂದು ಕಾಂಗ್ರೆಸ್‌ ಸಭಾತ್ಯಾಗ: ಸಿಎಂ ಬೊಮ್ಮಾಯಿ ಆಕ್ರೋಶದ ನುಡಿ

ಬೆಂಗಳೂರು:  ಬಜೆಟ್‌ ಮೇಲಿನ ಮುಖ್ಯಮಂತ್ರಿ ಬಸವರಾಜ್‌ ಬೊಮಮಾಯಿಯವರ ಉತ್ತರಕ್ಕೆ ಕಾಂಗ್ರೆಸ್‌ ನಾಯಕರ ಅಸಮಾದಾನ ವ್ಯಕ್ತಪಡಿಸಿದ್ದಾರೆ. ನಿರಾಶಾದಾಯಕ ಬಜೆಟ್‌ ಎಂದು ಕಾಂಗ್ರೆಸ್‌ ಸಭಾತ್ಯಾತಗ ಮಾಡಿದ್ದಾರೆ. ಕಾಂಗ್ರೆಸ್‌ ಸದಸ್ಯರ ಈ ನಡವಳಿಕೆ ವಿರುದ್ಧ ಸಿಎಂ ಗರಂ ಆಗಿದ್ದು, ತಿರುಗೇಟು ನೀಡ್ದದಾರೆ. ನಾನಿನ್ನೂ ಸಂಪೂರ್ಣ ಉತರವೇ ನೀಡಿಲ್ಲ, ಆಗಲೇ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ ವಿರೋಧ ಮಾಡಬೇಕು ಎಂಬ ಕಾರಣಕ್ಕೆ ವಿರೋಧ ಮಾಡುವುದಾ..?ಎಂದು ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಜನಪರ ಕಾಳಜಿ ಇಲ್ಲ ಅಭಿವೃದ್ದಿ ದೃಷ್ಟಿಯಿಟ್ಟುಕೊಂಡು ಮಾಡಿದ ಬಜೆಟ್‌ ಇದು ಆದರೂ ಕಾಂಗ್ರೆಸ್‌ ವಿರೋಧಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ. ಇದನ್ನೆಲ್ಲ ಹೇಗೆ ಜಾರಿ ಮಾಡ್ತೀರೆಂದು ಕೆಲವರು ಕೇಳಿದ್ದಾರೆ. ನಮ್ಮ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಇದೆ. ಈ ಬಗ್ಗೆ ಯಾರಿಗೂ ಸಂಶಯ ಬೇಡವೆಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಹೇಳಿದ್ರು.

Share Post