Districts

ಹೇಮಾವತಿ ಜಲಾಶಯ ಕಟ್ಟಿದ್ದು ನಾನೇ..ನಮಗೇ ಡ್ಯಾಂ ನೀರು ಬಳಸಲು ಅವಕಾಶವಿಲ್ಲ-HDD

ಹಾಸನ: ಹೇಮಾವತಿ ನೀರು ಬಳಕೆ ವಿಚಾರವಾಗಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ರಾಷ್ಟ್ರೀಯ ಪಕ್ಷಗಳ ವಿರುದ್ಧ ಗುಡುಗಿದ್ದಾರೆ. ಹೇಮಾವತಿ ಜಲಾಶಯ ಕಟ್ಟದವನು ನಾನು..ಆದರೆ ಈಗ ಆ ನೀರನ್ನು ಬಳಸಲು ನಮಗೇ ಅವಕಾಶ ನೀಡ್ತಿಲ್ಲ ಎಂದು ದೇವೇಗೌಡರು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಟಿ.ಮಾಯನಹಳ್ಳಿಯಲ್ಲಿ ಹೇಳಿದ್ದಾರೆ.

ಈ ಬಗ್ಗೆ ಸಂಸತ್‌ನಲ್ಲಿ ನಾನು ಮಾತನಾಡಲು ಪ್ರಯತ್ನ ಮಾಡಿದೆ. ಆದರೆ ತಮಿಳುನಾಡಿನ ಎಲ್ಲಾ ಪಕ್ಷಗಳ ಸಂಸದರು ಒಂದಾಗಿ ನನ್ನನ್ನು ಮಾತನಾಡಲು ಬಿಡ್ಲಿಲ್ಲ. ಹೀಗಾಗಿ ಸಂಸತ್‌ನಲ್ಲಿ ನನಗೆ ಮಾತನಾಡಲು ಆಗಲಿಲ್ಲ. ನಾನು ಒಬ್ಬನೇ ಆದೆ, ನಮ್ಮದು ಮೂರು ಪಕ್ಷ, ಮೂರು ಗುಂಪು. ಜಲ ವಿವಾದದ ಬಗ್ಗೆ ನಮ್ಮ ರಾಜ್ಯದ ನಾಯಕರು ಒಂದಾಗಲ್ಲ ಎಂದು ಪರೋಕ್ಷವಾಗಿ ದೇವೇಗೌಡರು ಮಾಹಿತಿ ನೀಡಿದ್ರು. ನನಗೆ ಶಕ್ತಿ ಇರುವವರೆಗೂ ಈ ನಾಡಿಗಾಗಿ ನಾನು ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ರು.

Share Post