Bengaluru

ಚಂದ್ರಯಾನ-3 ಯಶಸ್ವಿಯಾಗಲೆಂದು ದೇಶದ ಹಲವೆಡೆ ಪೂಜೆ-ಪುನಸ್ಕಾರ

ಬೆಂಗಳೂರು; ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಲೆಂದು ದೇಶದೆಲ್ಲೆಡೆ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಎಲ್ಲಾ ದೇಗುಲಗಳನ್ನೂ ವಿಶೇಷ ಪೂಜೆಗಳು ನಡೆಯುತ್ತಿವೆ. ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ಚಂದ್ರಯಾನ-೩ ಯಶಸ್ವಿಯಾಗಲೆಂದು ಹೋಮ-ಹವನ ಮಾಡಲಾಗುತ್ತಿದೆ. ನವಗ್ರಹಗಳಿಗೆ ವಿಶೇಷ ಪೂಜೆಯ ಜೊತೆ ಚಂದ್ರಹೋಮವನ್ನು ನಡೆಸಲಾಗುತ್ತಿದೆ.

ಇನ್ನು ಶಿವಮೊಗ್ಗ ಜಿಲ್ಲೆಯ ಸಿಗಂಧೂರು ಚೌಡೇಶ್ವರಿ ದೇಗುಲದಲ್ಲೂ ಚಂದ್ರಯಾನ ಯಶಸ್ಸಿಗಾಗಿ ವಿಶೇಷ ಪೂಜೆ ನಡೆಸಲಾಯಿತು. ದುರ್ಗಾ ಸಪ್ತಸತಿ ಪಾರಾಯಣ, ಚಂಡಿಕಾ ಹೋಮಗಳನ್ನು ಮಾಡುವ ಮೂಲಕ, ಸಾಫ್ಟ್‌ ಲ್ಯಾಂಡಿಂಗ್‌ಗೆ ಪ್ರಾರ್ಥಿಸಲಾಗಿದೆ. ಹುಬ್ಬಳ್ಳಿಯ ಸಿದ್ಧರೂಢ ಆಶ್ರಮ, ಮಂತ್ರಾಲಯ ಸೇರಿದಂತೆ ರಾಜ್ಯ ಹಾಗೂ ದೇಶದ ಪ್ರಮುಖ ದೇಗುಲಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಇನ್ನು ಜನರು ವೈಯಕ್ತಿಕವಾಗಿ, ಸಂಘ ಸಂಸ್ಥೆಗಳ ಮೂಲಕವೂ ಪೂಜೆಗಳು ನಡೆಯುತ್ತಿವೆ. ಹೋಮ-ಹವನಗಳನ್ನು ಮಾಡಿ ಚಂದ್ರಯಾನ-೩ ಯಶಸ್ಸಿಗೆ ಪ್ರಾರ್ಥನೆಗಳು ನಡೆಯುತ್ತಿವೆ.

 

Share Post