BengaluruCrime

ಚೈತ್ರಾ ಕುಂದಾಪುರ ಬಾಯಲ್ಲಿ ಸೋಪಿನ ನೊರೆ..?; ನವರಂಗಿ ನಾಟಕ ಆಡಿದಳಾ ವಂಚಕಿ..?

ಬೆಂಗಳೂರು; ಇಂದು ಬೆಳಗ್ಗೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಹೈಡ್ರಾಮಾನೇ ನಡೀತು. ಕೋಟಿ ಕೋಟಿ ವಂಚನೆ ಪ್ರಕರಣದ ವಿಚಾರಣೆ ಆರಂಭಿಸುತ್ತಿದ್ದಂತೆ, ಎ೧ ಆರೋಪಿ ಚೈತ್ರಾ ಕುಂದಾಪುರ ಅಸ್ವಸ್ಥಳಾದಂತೆ ವಿಲವಲ ಒದ್ದಾಡುತ್ತಾ ಬಿದ್ದುಬಿಟ್ಟಳು. ಆಕೆಯ ಬಾಯಲ್ಲಿ ಬೇರೆ ನೊರೆ ಬರುತ್ತಿತ್ತು. ಹೀಗಾಗಿ ಫಿಟ್ಸ್‌ ಬಂದಿರಬಹುದು ಅಂತ ಆಕೆಯನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಆದ್ರೆ, ಆಕೆಗೆ ಫಿಟ್ಸ್‌ ಬಂದಿಲ್ಲ. ಆಕೆ ನಾಟಕವಾಡಿದಳಾ ಎಂಬುದರ ಬಗ್ಗೆ ಅನುಮಾನ ಮೂಡೋದಕ್ಕೆ ಶುರುವಾಗಿದೆ.

ಚೈತ್ರಾಗೆ ಚಿಕಿತ್ಸೆ ನೀಡಿರುವ ವೈದ್ಯರು ಆಕೆಗೆ ಫಿಟ್ಸ್‌ ಬಂದಿರುವ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಹೀಗಾಗಿ ಚೈತ್ರಾ ನಾಟಕವಾಡಿರಬಹುದು ಎಂಬ ಅನುಮಾನಕ್ಕೆ ಸಾಕಷ್ಟು ಪುಷ್ಠಿ ಸಿಕ್ಕಂತಾಗಿದೆ. ಚೈತ್ರಾ ಬಟ್ಟೆ ವಾಶ ಮಾಡಿ, ಅದರ ನೊರೆಯನ್ನು ಬಾಯಿಗೆ ಹಾಕಿಕೊಂಡು ಬಂದು ನಾಟಕ ಮಾಡಿರಬಹುದು ಎಂದು ಶಂಕಿಸಲಾಗಿದೆ.

Share Post