BengaluruCrime

ದಂಡ ಉಳಿಸಿದ್ದರೆ ವಾಹನ ಇನ್ಶ್ಯೂರೆನ್ಸ್‌ ರಿನೀವಲ್‌ ಆಗೋದಿಲ್ಲ..!

ಬೆಂಗಳೂರು; ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟದೆ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಸಂಕಷ್ಟ ಕಾದಿದೆ. ದಂಡದ ಮೊತ್ತ ಬಾಕಿ ಉಳಿದಿದ್ದರೆ, ವಾಹನದ ಇನ್ಶ್ಯೂರೆನ್ಸ್‌ ರಿನೀವಲ್‌ ಮಾಡೋದಕ್ಕೆ ಆಗೋದಿಲ್ಲ. ಇನ್ಶ್ಯೂರೆನ್ಸ್‌ ಕಂಪನಿಗಳ ಮೂಲಕ ಬೆಂಗಳೂರು ಸಂಚಾರಿ ಪೊಲೀಸರು ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ.

ಇದಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರು ಐಟಿಎಂ ಸಿಸ್ಟಮ್ ಬಳಕೆಗೆ ಮುಂದಾಗಿದ್ದಾರೆ. ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸಿದವರನ್ನು ಪತ್ತೆ ಹಚ್ಚಲುಹಲವು ತಂತ್ರಜ್ಞಾಗಳನ್ನು ಬಳಸಿಕೊಳ್ಳಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

Share Post