BengaluruCrime

ಮನೆಯಲ್ಲಿ ಗಂಡಿನ ವೇಷ, ಬೀದಿಗೆ ಬಂದ್ರೆ ಹೆಣ್ಣಾಗ್ತಿದ್ದ; ಐಶಾರಾಮಿ ಜೀವನಕ್ಕಾಗಿ ಸುಲಿಗೆ..!

ಬೆಂಗಳೂರು; ಆತನಿಗೆ ಹೆಂಡತಿ, ಮಕ್ಕಳಿದ್ದಾರೆ. ಆದ್ರೆ ಆತ ಐಶಾರಾಮಿ ಜೀವನಕ್ಕಾಗಿ ಕುಟುಂಬದವರಿಗೆ ಗೊತ್ತಿಲ್ಲದೆ ಹೆಣ್ಣಿನ ವೇಷ ಹಾಕುತ್ತಿದ್ದ. ಜನರನ್ನು ಸುಲಿಗೆ ಮಾಡುತ್ತಿದ್ದ. ಇದೀಗ ಆತನ ಬಂಧನವಾಗಿದ್ದು, ಆರೋಪಿಯನ್ನು ಚೇತನ್‌ ಎಂದು ಗುರುತಿಸಲಾಗಿದೆ.

ಮಂಗಳಮುಖಿಯರ ಜೊತೆ ಸೇರಿ ಮಂಗಳಮುಖಿಯಂತೆ ಡ್ರೆಸ್‌ ಮಾಡಿಕೊಂಡು ಜನರಿಂದ ವಸೂಲಿ ಮಾಡುತ್ತಿದ್ದ ಚೇತನ್‌, ಹಣ ಕೊಡದಿದ್ದರೆ ಕೊಲೆ ಮಾಡೋದಾಗಿ ಜನರಿಗೆ ಬೆದರಿಕೆ ಹಾಕ್ತಿದ್ದ ಎಂದು ತಿಳಿದುಬಂದಿದೆ. ಮನೆಯಲ್ಲಿ ಪತ್ನಿ ಹಾಗೂ ಸಂಬಂಧಿಕರಿಗೆ ತಿಳಿಯದಂತೆ ಆಗ ಪ್ರತ್ಯೇಕ ರೂಮ್‌ ಬಾಡಿಗೆಗೆ ತೆಗೆದುಕೊಂಡು ಚೇತನ್‌ ಅಲ್ಲಿಗೆ ಹೋಗಿ ಹೆಣ್ಣಿನ ವೇಷ ಹಾಕುತ್ತಿದ್ದ. ಅನಂತರ ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತ ಭಿಕ್ಷಾಟನೆ ಮಾಡ್ತಿದ್ದನಂತೆ.

ಇತ್ತೀಚೆಗೆ ಆರೋಪಿ  ಮೆಟ್ರೋದ ಬಿಎಂಆರ್‌ಸಿಎಲ್ ಜಾಗದಲ್ಲಿ ಶೆಡ್ ನಿರ್ಮಾಣಕ್ಕೆ ಕೈಹಾಕಿದ್ದಾನೆ. ಈ ವೇಳೆ ಆತನ ವೇಶ ಬಯಲಾಗಿದೆ. ಕೂಡಲೇ ಆತನನ್ನು ಬಾಗಲಗುಂಟೆ ಪೊಲೀಸರಿಗೆ ಜನರು ಒಪ್ಪಿಸಿದ್ದಾರೆ.

 

Share Post