Bengaluru

ಮಂಡ್ಯದಲ್ಲಿ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡ ನಟಿ ಲೀಲಾವತಿ

ಬೆಂಗಳೂರು; ಕಾವೇರಿ ಹೋರಾಟ ಜೋರಾಗುತ್ತಿದೆ. ರೈತರು ಕನ್ನಡ ಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಇದರ ನಡುವೆ ಸಿನಿಮಾ ನಟ, ನಟಿಯರು ಬೆಂಬಲ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿರುವಾಗಲೇ ಹಿರಿಯ ನಟಿ ಲೀಲಾವತಿಯವರು ತಮ್ಮ ಅನಾರೋಗ್ಯ ಲೆಕ್ಕಸದೇ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ಇಂದು ಲೀಲಾವತಿಯವರು ತಮ್ಮ ಪುತ್ರ ವಿನೋದ್‌ ರಾಜ್‌ ಜೊತೆ ಸೇರಿ ಮಂಡ್ಯಕ್ಕೆ ತೆರಳಿದರು. ಅಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ಮೂಲಕ ಹೋರಾಟಗಾರರಲ್ಲಿ ಶಕ್ತಿ ತುಂಬಿದರು. ಕಾವೇರಿ ವಿಚಾರವಾಗಿ ನಾನು ಎಂದಿಗೂ ರೈತರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಅವರು ಹೇಳಿದರು.

 

Share Post