BengaluruCrime

ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಿದ್ದಕ್ಕೆ ನಟ ಪ್ರಥಮ್‌ಗೆ ನಿರಂತರ ಜೀವಬೆದರಿಕೆ!

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ನಟ ಪ್ರಥಮ್‌ ಇತ್ತೀಚೆಗೆ ಹೇಳಿಕೆಯೊಂದು ನೀಡಿದ್ದರು.. ಇದರಿಂದ ಕೆರಳಿದ್ದ ದರ್ಶನ್‌ ಅಭಿಮಾನಿಗಳು ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರಂತೆ.. ಈ ಹಿನ್ನೆಲೆಯಲ್ಲಿ ನಟ ಪ್ರಥಮ್‌ ಅವರು ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಿದ್ದಾರೆ.. ನನಗೆ ನಿರಂತರವಾಗಿ ಜೀವಬೆದರಿಕೆ ಕರೆ ಬರುತ್ತಿವೆ.. ಕರೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪ್ರಥಮ್‌ ಮನವಿ ಮಾಡಿಕೊಂಡಿದ್ದಾರೆ..

ದಿನಕ್ಕೆ 500 ಕರೆಗಳು ಬರುತ್ತಿವೆ.. ಜೊತೆಗೆ ಕರ್ನಾಟಕದ ಅಳಿಯ ಚಿತ್ರ ತಂಡದ ಆಫೀಸ್‌ಗೂ ಕರೆ ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಪ್ರಥಮ್‌ ಹೇಳಿಕೊಂಡಿದ್ದಾರೆ.. ಇನ್ನು ಈ ಬಗ್ಗೆ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಕೂಡಾ ಹಾಕಿದ್ದಾರೆ.. ಅದರಲ್ಲೇನಿದೆ ನೋಡಿ..

ʻಜೀವನ ದೊಡ್ಡದು;ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ; ನಾನು ಶಾಂತಿಯಿಂದಲೇ ಇದ್ದೆ;ನೀವು ಅತೀಯಾಗಿ ನಮ್ಮ #ಕರ್ನಾಟಕದಅಳಿಯ ತಂಡದoffice noಗೆ ಬೆದರಿಕೆ ಹಾಕುತಿದ್ದೀರಾ; ಇನ್ಮೇಲೆ ನನಗೆ ಬರೋ ಕಾಲ್ msg,social media warningಎಲ್ಲವೂ ಪೋಲೀಸರು ನೋಡಿಕೊಳ್ತಾರೆ; ಬದುಕು ಸುಂದರವಾದದ್ದು; #ಅಂಧಾಭಿಮಾನಿಗಳೇ, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿʼ ಹೀಗಂತ ಪ್ರಥಮ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ..

Share Post