BengaluruCrimeNational

ಕುಡಿದ ಮತ್ತಲ್ಲಿ ಕಾರು ಚಲಾಯಿಸಿದ ಸ್ನೇಹಿತ; ಮುಂಬೈನಲ್ಲಿ ಗಗನಸಖಿ ಸಾವು

ಬೆಂಗಳೂರು; ಕುಡಿದ ಮತ್ತಿನಲ್ಲಿ ಚಲಾಯಿಸಿದ್ದರಿಂದ ಐಶಾರಾಮಿ ಕಾರು ಅಪಘಾತಕ್ಕೀಡಾಗಿದ್ದು, ಅದರಲ್ಲಿ ಕುಳಿತಿದ್ದ ಗಗನಸಖಿಯೊಬ್ಬರು ಸಾವನ್ನಪ್ಪಿದ್ದಾಳೆ. ಮುಂಬೈನ ಜುಹು ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ದೆಹಲಿಯಿಂದ ವೈಯಕ್ತಿಯ ಕೆಲಸದ ಮೇಲೆ ಗಗನಸಖಿ ಮುಂಬೈಗೆ ಬಂದಿದ್ದಳು. ಸ್ನೇಹಿತನ ಕಾರಿನಲ್ಲಿ ತೆರಳುತ್ತಿದ್ದಾಗ ಆ ಕಾರು ಬಿಎಂಸಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಮೃತ ಗಗಮಸಖಿ ಪಲ್ಲವಿ ಭಟ್ಟಾಚಾರ್ಯ ಎಂದು ತಿಳಿದುಬಂದಿದೆ. ಈಕೆ ಕೋಲ್ಕತ್ತಾ ಮೂಲದವರಾಗಿದ್ದು, ದೆಹಲಿಯಲ್ಲಿ ವಾಸವಿದ್ದಳು. ಲೇಸರ್‌ ಸರ್ಜರಿಗಾಗಿ ಮುಂಬೈಗೆ ಆಗಮಿಸಿದ್ದ ಪಲ್ಲವಿ, ಸ್ನೇಹಿತ ಅರ್ಧವ್ಯು ಎಂಬಾತನೊಂದಿಗೆ ರಾತ್ರಿ ಪಾರ್ಟಿಗೆ ಹೋಗಿದ್ದಳು. ವಾಪಸ್‌ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಅರ್ಧವ್ಯು ಕಂಠಪೂರ್ತಿ ಕುಡಿದು ಬಿಎಂಡಬ್ಲ್ಯೂ ಕಾರು ಚಾಲನೆ ಮಾಡುತ್ತಿದ್ದ ಎಂದು ಗೊತ್ತಾಗಿದೆ.

ಕಾರಿನಲ್ಲಿ ಇಬ್ಬರು ಸ್ನೇಹಿತರಿದ್ದರು. ಕಾರು ಓಡಿಸುತ್ತಿದ್ದಾತ ಹಾಗೂ ಇತರ ಇಬ್ಬರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಪಲ್ಲವಿ ಮೃತಪಟ್ಟಿದ್ದಾರೆ.

Share Post