BengaluruCrime

ಬೆಂಗಳೂರಿನಲ್ಲಿ ಮಗನನ್ನು ಗುಂಡಿಕ್ಕಿ ಕೊಂದ ಹೆತ್ತ ತಂದೆ!

ಬೆಂಗಳೂರು; ಹೆತ್ತವರು ಮಕ್ಕಳು ಎಷ್ಟೇ ಕೆಟ್ಟವರಾಗಿದ್ದರೂ ಸಹಿಸಿಕೊಳ್ಳುತ್ತಾರೆ. ಅವರು ಬದಲಾಗದಿದ್ದರೂ ಜೀವನಪೂರ್ತಿ ಬದಲಿಸಲು ಪ್ರಯತ್ನಿಸುತ್ತಿರುತ್ತಾರೆ. ಎಂತವರೇ ಆದರೂ ಮಕ್ಕಳ ಮೇಲೆ ಹೆತ್ತವರಿಗೆ ಅಪಾರ ಪ್ರೀತಿ ಇರುತ್ತದೆ. ಒಂದೊಮ್ಮೆ ಮಕ್ಕಳು ಹೆತ್ತವರನ್ನೇ ಕೊಲ್ಲುವ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟು ಸಿಗುತ್ತವೆ. ಆದ್ರೆ ಹೆತ್ತವರೇ ಮಕ್ಕಳನ್ನು ಕೊಲ್ಲೊದು ಕಡಿಮೆ. ಆದ್ರೆ ಇಲ್ಲೊಬ್ಬ ತಂದೆ ಹೆತ್ತ ಮಗನನ್ನೇ ಗುಂಡಿಕ್ಕಿ ಕೊಂದಿದ್ದಾನೆ. 

    ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೊಂದು ಕೃತ್ಯ ನಡೆದಿದೆ. ಕರೆಕಲ್‌ನ ಮನೆಯೊಂದರಲ್ಲಿ ಗುರುವಾರ ರಾತ್ರಿ ಗುಂಡಿನ ಶಬ್ದ ಬಂದಿದೆ. ಭಯಬೀತಗೊಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಬಂದು ನೊಡಿದಾಗ 32 ವರ್ಷದ ವ್ಯಕ್ತಿ ರಕ್ತದಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಬದುಕುಳಿದಿಲ್ಲ.

    ನರ್ತನ್‌ ಬೋಪಣ್ಣ ಎಂಬಾತನೇ ಕೊಲೆಯಾದ ವ್ಯಕ್ತಿ. ಸುರೇಶ್‌ ಎಂಬಾತನೇ ತನ್ನ ಮಗನನ್ನು ಗುಂಡಿಕ್ಕಿ ಕೊಲೆ ಮಾಡಿದ ಪಾಪಿ ತಂದೆ.  ಈ ಕೃತ್ಯಕ್ಕೆ ಕಾರಣ ಏನು ಅನ್ನೋದು ಇನ್ನು ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

 

Share Post