BengaluruInternationalNational

ಸೂಡಾನ್‌ ಸಂಘರ್ಷದಲ್ಲಿ ಸಿಕ್ಕಿದ 31 ಕನ್ನಡಿಗರು; ಭಾರತಕ್ಕೆ ಕರೆಸಲು ಮೊರೆ

ಆಫ್ರಿಕಾ; ಆಫ್ರಿಕಾದ ಸೂಡಾನ್‌ ನಲ್ಲಿ ಸೇನಾ ಸಂಘರ್ಷ ನಡೆಯುತ್ತಿದೆ. ಇದರಲ್ಲಿ ಸಿಲುಕಿ ರಾಜ್ಯದ 31 ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಭಾರತಕ್ಕೆ ವಾಪಸ್‌ ಕರೆತರುವಂತೆ ಗೋಗರೆಯುತ್ತಿದ್ದಾರೆ. ಮೂವತ್ತೊಂದು ಮಂದಿಯೂ ಕರ್ನಾಟಕದವರಾಗಿದ್ದು, ಎಲ್ಲರೂ ಅಕ್ಕಿಪಿಕ್ಕಿ ಅಲೆಮಾರಿ ಜನಾಂಗದವರಾಗಿದ್ದಾರೆ. ವ್ಯಾಪಾರಕ್ಕಾಗಿ ಎಲ್ಲರೂ ಸೂಡಾನ್‌ಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಶಿವಮೊಗ್ಗದ ಏಳು ಮಂದಿ, ಮೈಸೂರು ಜಿಲ್ಲೆ ಹುಣಸೂರಿನ 19 ಮಂದಿ ಹಾಗೂ ಚನ್ನಗಿರಿಯ ಐದು ಮಂದಿ ಸೂಡಾನ್‌ನಲೊಲಿ ಸಿಲುಕಿದ್ದಾರೆ. ಎಲ್ಲರೂ ಹೊರಹೋಗದ ಸ್ಥಿತಿಯಲ್ಲಿದ್ದು, ಅನ್ನ, ನೀರು ಇಲ್ಲದೆ ಪರಿತಪಿಸುತ್ತಿದ್ದಾರೆ. ನಮ್ಮನ್ನು ಭಾರತಕ್ಕೆ ಕರೆದುಕೊಂಡು ಬನ್ನಿ ಎಂದು ಅವರು ಗೋಗರೆಯುತ್ತಿದ್ದಾರೆ. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಸೂಡಾನ್‌ನಲ್ಲಿ ಸಿಲುಕಿದವರನ್ನು ವಾಪಸ್‌ ಕರೆತರುವಂತೆ ಮನವಿ ಮಾಡಿಕೊಂಡಿದ್ದಾರೆ.

Share Post