BengaluruScience

ಸೋಮಣ್ಣ ಮನವೊಲಿಸಲು ಲಿಂಗಾಯತ ಸ್ವಾಮಿಗಳ ಮೊರೆ ಹೋದ ಬಿಜೆಪಿ ನಾಯಕರು

ಬೆಂಗಳೂರು; ಸಿದ್ದಗಂಗಾ ಶ್ರೀಗಳ ಮುಂದೆ ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷದಲ್ಲಾದ ಅನ್ಯಾಯದ ಬಗ್ಗೆ ಗೋಳು ತೋಡಿಕೊಂಡಿದ್ದರು. ಇದಾದ ಮೇಲೆ ಬಿಜೆಪಿ‌ ನಾಯಕರು ಸೋಮಣ್ಣ ಮನವೊಲಿಸಲು ನಾನಾ ಯಂತ್ರ ಮಾಡುತ್ತಿದ್ದಾರೆ. ಅದಕ್ಕಾಗಿ ಲಿಂಗಾಯತ ಸ್ವಾಮಿಗಳನ್ನು ಬಳಸಿಕೊಳ್ಳುತ್ತಿದ್ದಾರೆ.

 ಸೋಮಣ್ಣ ಅವರು‌‌ ಗೋವಿಂದರಾಜ‌ನಗರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದ್ರೆ ಹೈಕಮಾಂಡ್ ಚಾಮರಾಜನಗರ ಹಾಗೂ ವರುಣಾ ಕ್ಷೇತ್ರದಿಂದ ಟಿಕೆಟ್ ಕೊಟ್ಟಿತ್ತು. ಎರಡೂ ಕಡೆ ಸೋತ ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಯಸಿದ್ದರು. ಆದ್ರೆ ವಿಜಯೇಂದ್ರಗೆ ಪಟ್ಟ ಕಟ್ಟಿದ್ದರಿಂದ ಸೋಮಣ್ಣ ಬೇಸರಗೊಂಡಿದ್ದಾರೆ.

ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸೋಮಣ್ಣ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಲಿಂಗಾಯತ ಮಠಾಧೀಶರನ್ನು ಸಂಪರ್ಕ ಮಾಡಿರುವ ಬಿಜೆಪಿ ನಾಯಕರು, ಸೋಮಣ್ಣರ ಮನವೊಲಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Share Post