AstrologyBusinessLifestyle

ಮನೆಯಲ್ಲಿನ ವಾಸ್ತು ದೋಷ ನಿವಾರಣೆಗೆ ಸರಳ ಪರಿಹಾರಗಳು!

ಬೆಂಗಳೂರು; ಮನೆಯನ್ನು ವಾಸ್ತು ಪ್ರಕಾರವೇ ಕಟ್ಟಿರುತ್ತಾರೆ.. ಆದ್ರೆ, ಮನೆಯಲ್ಲಿರುವ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಡದ ಕಾರಣಕ್ಕೋ, ಆ ಸ್ಥಳದ ಕಾರಣದಿಂದಲೋ ತೊಂದರೆಗಳಾಗುತ್ತಿರುತ್ತವೆ.. ಒಳ್ಳೆಯ ಮನೆಯನ್ನು ಕಟ್ಟಿದ್ದರೂ ಮನೆಯಲ್ಲಿ ನೆಮ್ಮದಿ ಇರೋದಿಲ್ಲ.. ನಿಮ್ಮ ಎಲ್ಲಾ ಚಟುವಟಿಕೆಗಳಿಗೂ ಅಡ್ಡಿಯಾಗುತ್ತಿರುತ್ತದೆ.. ಕಲಹಗಳು, ವಿವಾದಗಳು ಹೆಚ್ಚಾಗುತ್ತವೆ.. ಏನೇ ಮಾಡೋಕೆ ಹೋದರೂ ಅಲ್ಲಿ ಅಡೆತಡೆಗಳಾಗುತ್ತವೆ.. ನಿಮಗೂ ಹಾಗೆ ಆಗುತ್ತಿದ್ದರೆ, ಸಣ್ಣ ಪರಿಹಾರಗಳ ಮೂಲಕ ನಿಮ್ಮ ಮನೆಯಲ್ಲಿನ ದೋಷಗಳನ್ನು ಹೋಗಲಾಡಿಸಬಹುದು..
ಕರ್ಪೂರದಿಂದ ವಾಸ್ತು ದೋಷ ನಿವಾರಿಸಿ;
ಮನೆಯಲ್ಲಿ ಎಲ್ಲವೂ ಸರಿಯಿದ್ದರೂ ಮನೆಯಲ್ಲಿ ನೆಮ್ಮದಿ ಇಲ್ಲವೇ..? ಹಾಗಾದರೆ ಅದನ್ನು ಕರ್ಪೂರವನ್ನು ಬಳಸಿ.. ವಾಸ್ತು ತಜ್ಞರನ್ನು ಸಂಪರ್ಕಿಸಿ ವಾಸ್ತು ಸರಿಯಿಲ್ಲದ ಜಾಗದಲ್ಲಿ ಕರ್ಪೂರವನ್ನು ಇಡಿ.. ಅದು ಅಲ್ಲಿಯೇ ಕರಗಿದ ಮೇಲೆ ಅಲ್ಲಿ ಮತ್ತೊಂದು ಕರ್ಪೂರ ಇಡುತ್ತಾ ಬನ್ನಿ.. ಹೀಗೆ ಮಾಡುವುದರಿಂದ ಮನೆಯ ದೋಷ ನಿವಾರಣೆಯಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ..
ಆರ್ಥಿಕ ಬಿಕ್ಕಟ್ಟು ತಡೆಯಲು ಹೀಗೆ ಮಾಡಿ;
ನೀವು ಆರ್ಥಿಕ ಸಂಕಷ್ಟು ಎದುರಿಸುತ್ತಿದ್ದೀರಾ..? ಎಷ್ಟೇ ದುಡಿದರೂ ಖರ್ಚು ಹೆಚ್ಚಾಗಿ ಸಾಲಗಳಾಗುತ್ತಿವೆಯಾ..? ಹಾಗಾದರೆ ನೀವು ಅಡುಗೆ ಮನೆಯಲ್ಲಿ ಬೆಳ್ಳಿಯ ಪಾತ್ರೆಯನ್ನು ಇಟ್ಟು ಕರ್ಪೂರ ಹಾಗೂ ಲವಂಗ ಒಟ್ಟಿಗೆ ಸುಡುತ್ತಾ ಬನ್ನಿ.. ಪ್ರತಿದಿನ ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಲಕ್ಷ್ಮೀದೇವಿ ಪ್ರವೇಶವಾಗುತ್ತದೆ.. ಮನೆಯವರೆಲ್ಲರಿಗೂ ಲಕ್ಷ್ಮೀಯ ಅನುಗ್ರಹ ಸಿಗಲಿದೆ..
ಅದೃಷ್ಟ ಹೆಚ್ಚಾಗಲು ಕರ್ಪೂರದೆಣ್ಣೆ ಬಳಸಿ;
ನಿಮಗೆ ಅದೃಷ್ಟ ಕೈಕೊಡುತ್ತಿದೆಯಾ..? ಯಶಸ್ಸಿನ ಹತ್ತಿರಕ್ಕೆ ಹೋಗಿ ಮುಗ್ಗರಿಸುತ್ತಿದ್ದೀರಾ..? ಹಾಗಾದರೆ, ಸ್ನಾನದ ನೀರಿನಲ್ಲಿ ಕರ್ಪೂರದ ಎಣ್ಣ ಹಾಕಿ.. ಅದರಿಂದ ಸ್ನಾನ ಮಾಡಿ. ಆಗ ನಿಮ್ಮ ಜೀವನದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ..
ಮನೆಯಲ್ಲಿ ಶಾಂತಿ ನೆಲೆಸಬೇಕೆ..?;
ಕೆಲವರ ಮನೆಯಲ್ಲಿ ಎಲ್ಲಾ ಇರುತ್ತದೆ.. ಆದ್ರೆ ಶಾಂತಿ ಮಾತ್ರ ಇರೋದಿಲ್ಲ.. ಕಿತ್ತಾಟಗಳು ನಡೆಯುತ್ತಲೇ ಇರುತ್ತವೆ.. ಹೀಗಾಗಿ ಇಂತಹ ಮನೆಯಲ್ಲಿ ಶಾಂತಿ ನೆಲೆಸಬೇಕಾದರೆ ಕರ್ಪೂರವನ್ನು ದೇಸಿ ತುಪ್ಪದಲ್ಲಿ ಅದ್ದಿ ತೆಗೆದು ಅದನ್ನು ಬೆಳಗಿಸಬೇಕು.. ಇದರಿಂದ ಅದರ ಸುಗಂಧ ಇಡೀ ಕೋಣೆ ಆವರಿಸುತ್ತದೆ.. ಇದರಿಂದ ಧನಾತ್ಮಕ ಶಕ್ತಿ ಅಲ್ಲಿ ನೆಲೆಸುತ್ತದೆ.. ಇದರಿಂದ ಸಂಸಾರದಲ್ಲಿ ನೆಮ್ಮದಿ, ಉತ್ತಮ ಆರೋಗ್ಯ ನಿಮ್ಮದಾಗುತ್ತದೆ..
ವ್ಯವಹಾರದಲ್ಲಿ ಯಶಸ್ಸು ಸಿಗಬೇಕೇ..?;
ಇನ್ನು ವ್ಯವಹಾರ ಉತ್ತಮವಾಗಿ ನಡೆಯುತ್ತಿದ್ದರೂ ಯಶಸ್ಸು ಅನ್ನೋದು ಇರೋದಿಲ್ಲ.. ಇಲ್ಲ ಯಾವುದೇ ವ್ಯವಹಾರ ಮಾಡಿದರೂ ಅದು ಕೈಹಿಡಿಯುತ್ತಿರೋದಿಲ್ಲ.. ಇಂತಹವರು ಮನೆಯಲ್ಲಿ ಕರ್ಪೂರ ಹಾಗೂ ಲವಂಗವನ್ನು ಮಿಶ್ರಣ ಮಾಡಿ, ಅಡುಗೆ ಮನೆಯಲ್ಲಿ ಸ್ವಚ್ಛವಾಗಿರುವ ಸ್ಥಳದಲ್ಲಿ ಇರಿಸಬೇಕು.. ಇದು ಮನೆಯಲ್ಲಿರುವ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ.. ಹಿಡಿದ ಕೆಲಸಗಳು ಕೈಹಿಡಿಯುತ್ತವೆ.. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಸಿಗಲಿದೆ..

Share Post