Districts

ನನ್ನ ರಾಜೀನಾಮೆ ನಿಮ್ಮ ಕೈಯಲ್ಲಿದೆ: ಗೃಹ ಸಚಿವ

ಶಿವಮೊಗ್ಗ: ನಾನು ಗೃಹಸಚಿವನಾಗಿ ಉಳಿಯುವುದು ಬಿಡುವುದು ನಿಮ್ಮ ಕೈಯಲಿದೆ. ನೀವು ಮಾಡುವ ಕೆಲಸದ ಮೇಲೆ ನನ್ನ ಅಧಿಕಾರ ನಿರ್ಧಾರವಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಕಿವಿಮಾತನ್ನು ಹೇಳಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನೀವು ಒಳ್ಳೆಯ ರೀತಿ ಕೆಲಸ ಮಾಡಿದ್ರೆ ನನಗೂ ಕ್ರೆಡಿಟ್‌ ಸಿಗುತ್ತೆ ಇಲ್ಲವಾದ್ರೆ ನನ್ನ ಮುಂದಿನ ನಿರ್ಧಾರಕ್ಕೆ ನೀವೇ ನೇರ ಹೊಣೆಯಾಗಿರುತ್ತೀರಿ. ನೀವು ತಪ್ಪು ಮಾಡಿದ್ರೆ ನಾನು ರಾಜೀನಾಮೆ ನೀಡುವುದು ಖಚಿತ. ಒಳ್ಳೆಯ ಕೆಲಸ ಮಾಡಿ ನಿಮ್ಮ ಅವಶ್ಯಕತೆ, ಅಗತ್ಯತೆಗಳಿಗೆ ನಾನು ಸದಾ ಸ್ಪಂದಿಸುತ್ತೇನೆ ಎಂಬ ವಿಚಾರವನ್ನು ಹೇಳಿದ್ರು.

ಕೊರೊನಾ, ಓಮಿಕ್ರಾನ್ ಸೋಂಕಿನ ನಡುವೆಯೂ ಇಲ್ಲಿನ ಪ್ರಸಿದ್ದ ಎಳ್ಳಮಾಸ್ಯೆ ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ. ಮೂರು ದಿನ ನಡೆಯುವ ಜಾತ್ರೆಗೆ ಇಡೀ ತೀರ್ಥಹಳ್ಳಿ ಪಟ್ಟಣವನ್ನು ವಿದ್ಯತ್‌ ದೀಪಗಳೊಂದಿಗೆ ಅಲಂಕರಿಸಲಾಗಿದೆ. ಡಿ.2ರಂದು ತುಂಗಾನದಿಯ ರಾಮಕೊಂಡದಲ್ಲಿ ತೀರ್ಥಸ್ನಾನ, 3ರಂದು ಶ್ರೀ ರಾಮೇಶ್ವರ ದೇವರ ರಥೋತ್ಸವ ಹಾಗೂ 4 ರಂದು ಸಂಜೆ ತುಂಗಾನದಿಯಲ್ಲಿ ಸಿಡಿಮದ್ದುಗಳ ಪ್ರದರ್ಶನದೊಂದಿಗೆ ವೈಭವದ ತೆಪ್ಪೋತ್ಸವ ಜರುಗಲಿದೆ.

Share Post